Posts Slider

Karnataka Voice

Latest Kannada News

ಹ್ಯಾರಿಸ್ ಪಠಾಣ- ಕೋರ್ಟಗೆ ಶರಣಾಗತಿ…!

1 min read
Spread the love

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಹೊಟೇಲ್ ಮುಂಭಾಗದಲ್ಲಿ ರಿವಾಲ್ವರಿನಿಂದ ಹತ್ಯೆಯಾಗಿದ್ದ ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳ ಪ್ರಕರಣದಲ್ಲಿ ಬೇಕಾಗಿದ್ದ ಧಾರವಾಡದ ಹ್ಯಾರಿಸ್ ಪಠಾಣ ಹುಬ್ಬಳ್ಳಿಯ 4ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

ಕಳೆದ ವರ್ಷ ಆಗಸ್ಟ್ 6ರಂದು ಹತ್ಯೆಯಾಗಿದ್ದ ಪ್ರೂಟ್ ಇರ್ಫಾನ್ ಕೊಲೆ ಪ್ರಕರಣದಲ್ಲಿ ಹ್ಯಾರಿಸ್ ಪಠಾಣ ಪೊಲೀಸರಿಗೆ ಬೇಕಾಗಿದ್ದ. ಕಳೆದ ಎಂಟೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಹ್ಯಾರಿಸ್, ನ್ಯಾಯಾಲಯದ ಮೂಲಕ ಶರಣಾಗಿದ್ದಾನೆ.

ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಹ್ಯಾರಿಸ್ ಪಠಾಣ, ಅಲ್ಲಿ ಜಾಮೀನು ಸಿಗದೇ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೂಲಕ ಶರಣಾಗಿದ್ದಾನೆ.

ಹತ್ಯೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಶರಣಾಗಿರುವ ಹ್ಯಾರಿಸ್ ಪಠಾಣನನ್ನ ಹಳೇಹುಬ್ಬಳ್ಳಿ ಠಾಣೆ ಪೊಲೀಸರು, ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುವ ಸಾಧ್ಯತೆಯಿದೆ.


Spread the love

Leave a Reply

Your email address will not be published. Required fields are marked *