Posts Slider

Karnataka Voice

Latest Kannada News

2022 ಸ್ವಾಗತಕ್ಕಾಗಿ ಸಂಭ್ರಮದಲ್ಲಿದ್ದೀರಾ… ನೀವು ಮಾಡುತ್ತಿರುವುದೇನು.. ಮಾಡಬೇಕಾಗಿದ್ದೇನು…!?

Spread the love

ಹುಬ್ಬಳ್ಳಿ: ಇನ್ನೇನು ಕೆಲವೇ ನೂರಾರೂ ನಿಮಿಷಗಳಲ್ಲಿ ಕ್ಯಾಲೆಂಡರ್ ನಲ್ಲಿ ದಿನಾಂಕ ಬದಲಾಗತ್ತೆ. ಅದಕ್ಕಾಗಿಯೇ ಬಹುತೇಕ ನಿಮ್ಮಗಳಲ್ಲಿ ಕೆಲವರು ಸುಮಾರು ಗಂಟೆಗಳಿಂದ ತಯಾರಿ ನಡೆಸಿದ್ದೀರಿ ಎಂದುಕೊಳ್ಳುತ್ತೇವೆ. ಆದರೆ, ಈ ದಿನಾಂಕಕ್ಕೆ ನೀವು ಇಷ್ಟೊಂದು ಪ್ರಾಮುಖ್ಯತೆ ಕೊಡಬೇಕಾ.. ಒಂದ್ನಿಮಿಷ ಬಿಡುವು ಮಾಡಿಕೊಂಡು ಪೂರ್ತಿ ಓದಿ..

ನೀವೂ ಈ ವರ್ಷದಲ್ಲಿ ಏನೂ ಘನಂಧಾರಿ ಕೆಲಸ ಮಾಡಿದ್ದೀರಿ ಎಂದುಕೊಂಡು ಈ ಆಚರಣೆ ಮಾಡುತ್ತಿದ್ದೀರಿ. ನಿಮ್ಮ ಮನೆಯಲ್ಲಿ ನಿಮ್ಮಿಂದ ಏನಾದರೂ ನೆಮ್ಮದಿ ಕೊಡಿಸಿದ್ದೀರಾ.

ನಿಮ್ಮ ಸಂಸ್ಕೃತಿಯನ್ನ ಹಾಳು ಮಾಡುವುದನ್ನ ನಿಮ್ಮ ಮಕ್ಕಳು ಮಾಡುತ್ತಿದ್ದರೂ, ಅದನ್ನ ಗಮನಿಸಿಯೂ ಗಮನಿಸದ ರೀತಿಯಲ್ಲಿ ನೀವು ಬದುಕು ಸಾಗಿಸುತ್ತಿದ್ದೀರಿ ಅಲ್ವಾ.. ಇದಕ್ಕಾಗಿ ಈ ಸಂಭ್ರಮವಾ.

ವಯಸ್ಸಾದ ತಂದೆ-ತಾಯಿಗಳ ಜೊತೆ ಎಷ್ಟೊ ದಿನಗಳವರೆಗೆ ಮಾತನಾಡದೇ ಕೂಡುವ ನೀವು, ಆ ಸಂಭ್ರಮವನ್ನ ಹೀಗೆ ಮಾಡೋದಾ. ನಿಮ್ಮ ಕಣ್ಣೇದುರಿಗೆ ಮಕ್ಕಳು ನಸೆಯಲ್ಲಿ ತೇಲುತ್ತಿದ್ದಾರೆ. ಆದರೂ, ನೀವೂ ಏನು ಮಾಡುತ್ತಿಲ್ಲ. ಆ ಕಾರಣಕ್ಕಾಗಿ ಈ ಸಂಭ್ರಮವಾ…?

ನೀವು ಬೆಳೆದ ಬಂದ ದಾರಿಯನ್ನೇ ಮರೆತು, ಹಣದ ಹಿಂದೆ ಬಿದ್ದು ಬದುಕು ನಾಶ ಮಾಡಿಕೊಂಡು, ನಮ್ಮ ಮುತ್ತಾತನ ಕಾಲದಿಂದಲೂ ನಂಬಿಕೊಂಡು ಬಂದ ಸಂಸ್ಕೃತಿಗೆ ಮೊಳೆ ಹೊಡೆಯುವ ಯತ್ನ ನಡೆಯುತ್ತಿದೆ ಎಂಬ ಕಲ್ಪನೆ ಮರೆತು ನ್ಯೂ ಇಯರ್ ಎಂಬ ಸಡಗರ ಮಾಡ್ತೀರಾ..?

ದೂರವಾಗುತ್ತಿರುವ 2021ರಲ್ಲಿ ನೀವು ಕಡಿದು ಕಟ್ಟೆ ಹಾಕಿದ್ದೇನು. ನಿಮ್ಮ ಸುತ್ತಮುತ್ತಲಿನವರೆಗೆ ನೀವೂ ಮಾಡಿದ ಸಹಾಯವೇನು. ಕೊನೆ ಪಕ್ಷ ನಿಮ್ಮ ಓಣಿಗೆ ಮಾಡಿರುವ ಉಪಕಾರ ಸ್ಮರಣೀಯವಾಗಿದೇಯಾ.. ಇದ್ಯಾವುದು ಇಲ್ಲವೆಂದರೇ, ಈ ಹೊಸ ವರ್ಷದ ನೆಪದಲ್ಲಿ ನಮ್ಮತನವನ್ನ ಕಳೆದುಕೊಳ್ಳುವುದು ಏಕೆ..?

ಮೊದಲು ನಾವು, ನಮ್ಮ ಸಂಸ್ಕೃತಿ ಮುಖ್ಯ. ಸಡಗರಗಳು, ಆಚರಣೆಗಳು ನಮ್ಮತನವನ್ನ ಉಳಿಸಿ ಬೆಳೆಸಬೇಕೆ ಹೊರತು. ನಮ್ಮತನವನ್ನ ಸುಟ್ಟು ಕರಕಲು ಮಾಡಬಾರದು.. ಅಲ್ವೆ…


Spread the love

Leave a Reply

Your email address will not be published. Required fields are marked *