Posts Slider

Karnataka Voice

Latest Kannada News

ವಿಶ್ವನಾಥರಿಗೆ ಅವಕಾಶ ಸಿಎಂ ಕೊಡ್ತಾರಂತೆ: ಊರು ಬಿಟ್ಟವರು ಸಚಿವರಾಗಿ ಹೇಳಿದ್ದು ಹೀಗೆ

1 min read
Spread the love

ತುಮಕೂರು: ಪಕ್ಷಾಂತರ ಮಾಡಿ ಸೋತು ಅವಕಾಶಕ್ಕಾಗಿ ಕಾದಿದ್ದ ಎಚ್.ವಿಶ್ವನಾಥ್ ಅವರಿಗೆ ಇನ್ನೂ ಅವಕಾಶ ಕೊಡ್ತಾರಂತೆ ಎಂದು ಪಕ್ಷಾಂತರಗೊಂಡು ಸಚಿವರಾಗಿರುವ ಸೋಮಶೇಖರ ಹೇಳಿದರು.

ಸಿದ್ಧಗಂಗಾ ಮಠಕ್ಕೆ ಸಚಿವರಾದ ಬಿ.ಸಿ ಪಾಟೀಲ್ ಹಾಗೂ ಎಸ್.ಟಿ ಸೋಮಶೇಖರ್ ಭೇಟಿ ನೀಡಿ ಶ್ರೀಗಳ ಗದ್ದುಗೆ ಆರ್ಶೀರ್ವಾದ ಪಡೆದ ಸಚಿವ ಸೋಮಶೇಖರ ಮಾತನಾಡುತ್ತಿದ್ದರು.

ಸ್ವಾಮೀಜಿಯ ಆರ್ಶೀರ್ವಾದ ಪಡೆಯಲು ಬಂದಿದ್ದೇವೆ. ಹಳ್ಳಿ ಹಕ್ಕಿಗೆ ಟಿಕೇಟ್ ಕೈತಪ್ಪಿದ ಹಿನ್ನಲೆಯಲ್ಲಿ ನಾನು ಮತ್ತು ಬಿ.ಸಿ ಪಾಟೀಲ್ ಸಿ.ಎಂ ಜೊತೆ ಮಾತನಾಡಿದ್ದೇವೆ. ಮುಂದಿನ ದಿನಗಳಲ್ಲಿ ಹಳ್ಳಿ ಹಕ್ಕಿಗೆ ಅವಕಾಶ ಕೊಡುತ್ತೇನೆ ಎಂದು ಸಿ.ಎಂ ಹೇಳಿದ್ದಾರೆ. ವಿಶ್ವನಾಥ್ ಅವರೂ ಕೂಡ ಮಾತನಾಡಿದ್ದೇವೆ. ಹೈಕಮಾಂಡ್ ನಿರ್ಧಾರವನ್ನ ವಿಶ್ವನಾಥ್ ಒಪ್ಪಿದ್ದಾರೆ. ಮುನಿರತ್ನಂ ಹಾಗೂ ಪ್ರತಾಪ್‌ಗೌಡ ಶ್ರೀಘ್ರದಲ್ಲೇ ಎಲೆಕ್ಷನ್‌ಗೆ ಹೋಗುತ್ತಾರೆ. ಕೋರ್ ಕಮೀಟಿ ಸಭೆಯಲ್ಲಿ ವಿಶ್ವನಾಥ್ ಅವರ ಹೆಸರು ಪ್ರಸ್ತಾಪವಾಗಿದೆ. ಇಬ್ಬರಿಗೆ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ವಿಶ್ವನಾಥ್ ಗೂ ಅವಕಾಶ ಸಿಗಲಿದೆ. ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಕೇಂದ್ರದಿಂದ ಬರುವ ಅನುದಾನ ಎಲ್ಲರಿಗೂ ಸಿಗಲಿ ಎಂದು ಅಧ್ಯಕ್ಷರ ಮೂಲಕ ಮನವಿ ಮಾಡಿದ್ದೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.


Spread the love

Leave a Reply

Your email address will not be published. Required fields are marked *

You may have missed