Posts Slider

Karnataka Voice

Latest Kannada News

ಸಿಗರೇಟಿನ ಹೊಗೆಯೂ “ಆ” 2ನಿಮಿಷ 41 ಸೆಕೆಂಡ್ ಸಿಸಿಟಿವಿ ದೃಶ್ಯ…!

Spread the love

ವಿಜಯಪುರ: ದಾಬಾವೊಂದರಲ್ಲಿ ಸಿಗರೇಟ್ ಹೊಗೆಯನ್ನ ಬಿಟ್ಟಿದ್ದನ್ನ ಪ್ರಶ್ನಿಸಿದ್ದ ಇಬ್ಬರು ಯುವಕರನ್ನ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಹೊರವಲಯದಲ್ಲಿರುವ ದಾಬಾವೊಂದರಲ್ಲಿ ನಡೆದಿದೆ.

https://www.youtube.com/watch?v=mdtxDZBQpnw
CCTV FOOTAGE

ದಾಬಾದಲ್ಲಿ ತಮ್ಮತ್ತ ಸಿಗರೇಟಗ್ ಸೇದಿ ಹೊಗೆ ಬಿಟ್ಟವರನ್ನು ಇಬ್ಬರು ಯುವಕರು ಪ್ರಶ್ನಿಸಿದ್ದಾರೆ. ಇದರಿಂದ ರೋಸಿ ಹೋದ ಯುವಕರು ತಮ್ಮದೊಂದು ತಂಡವೊಂದನ್ನ ಕಟ್ಟಿಕೊಂಡು ಬಂದು, ಇಬ್ಬರು ಯುವಕರನ್ನ ಮನಬಂದಂತೆ ಥಳಿಸಿದ್ದು, ಇದೀಗ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ.

ಕಳೆದ ಫೆಬ್ರುವರಿ 22 ರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ದಿಲೀಪ ಚವ್ಹಾಣ ಹಾಗೂ ಮಹಾಂತೇಶ ಚವ್ಹಾಣ  ಎಂಬ ಯುವಕರು ಹಲ್ಲೆಗೊಳಗಾಗಿದ್ದಾರೆ.  ಸತೀಶ ಬೂದಿಹಾಳ, ವಿಶ್ವನಾಥ ಸವದಿ ಹಾಗೂ‌ ಮತ್ತಿಬ್ಬರು ಸೇರಿಕೊಂಡು ಹಲ್ಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಾಬಾದ ಮುಂಭಾಗದಲ್ಲಿದ್ದ ಪೈಪ್, ಬಡಿಗೆ, ಕ್ಯಾನ್ ಮೂಲಕ ಹಲ್ಲೆ ಮಾಡಲಾಗಿದ್ದು, ಹಲ್ಲೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *