ಕೋವಿಡ್-19 ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ ರೂಪೇಶ: ಬಟ್ಟೆ ವ್ಯಾಪಾರಿಯ ಮೇಲೆ ಪ್ರಕರಣ
1 min readಚಾಮರಾಜನಗರ: ಅಂಗಡಿ ಮುಚ್ಚಲು ಹೇಳಿದ ಕೋವಿಡ್ ವಾರಿಯಸ್೯ ಆಗಿರುವ ಪಟ್ಟಣ ಠಾಣೆಯ ಎಸ್.ಐ ರಾಜೇಂದ್ರ ರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.
ಸಕಾ೯ರದ ಆದೇಶ ಉಲ್ಲಂಘಸಿ ನಿನ್ನೆರಾತ್ರಿ 8 ಗಂಟೆಯವರೆಗೂ ತನ್ನ ಶ್ರೀದೇವಿ ಕಲೆಕ್ಷನ್ ಬಟ್ಟೆ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ಮಾಲೀಕ ರೂಪೇಶ್, ಸಮಯ ಮೀರಿದೆ ಅಂಗಡಿ ಮುಚ್ಚು ಎಂದು ಹೇಳಿದಕ್ಕೆ ಎಸ್.ಐಗೆ ಅವಾಜ್ ಹಾಕಿ ಹಲ್ಲೆಗೆ ಯತ್ನಿಸಿದ್ದಾನೆ. ಕೊಳ್ಳೇಗಾಲ ಪಟ್ಟಣ ಠಾಣೆಯ ಪೊಲೀಸರು ರೂಪೇಶ್ ನನ್ನ ಬಂಧಿಸಿ, ಪ್ರಕರಣ ದಾಖಲು ಮಾಡಿದ್ದಾರೆ.