Posts Slider

Karnataka Voice

Latest Kannada News

ಧಾರವಾಡದಲ್ಲಿ “ರಾಮ ಸೇನಾ” ಜಿಲ್ಲಾಧ್ಯಕ್ಷನಿಂದ ‘ಪ್ರೇಯಸಿ’ ಕೊಲೆ ಯತ್ನ…!

Spread the love

ಧಾರವಾಡ: ಮದುವೆಯಾದ ನಂತರವೂ ತನ್ನ ಪ್ರೇಯಸಿ ಸಾಥ್ ಕೊಡುತ್ತಿಲ್ಲವೆಂದು ಚಾಕುವಿನಿಂದ ಮಹಿಳೆಯನ್ನ ಕೊಲೆ ಮಾಡುವ ಯತ್ನ ಧಾರವಾಡದ ಸೋನಾಪುರದಲ್ಲಿ ನಡೆದಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ರಾಮಸೇನಾದ ಜಿಲ್ಲಾಧ್ಯಕ್ಷ ವಿಜಯಕುಮಾರ ಕದಂ ಅಲಿಯಾಸ್ ವಿಜಯ ಕದಂ, ತನ್ನ ಪ್ರೇಯಸಿ ಪದ್ಮಾ ಎಂಬಾಕೆಯನ್ನ ಇರಿದು ಕೊಲೆ ಮಾಡುವ ಯತ್ನ ಮಾಡಿದ್ದಾನೆ.

ಘಟನೆಯ ನಂತರದ ದೃಶ್ಯಗಳು

ಮದುವೆಯಾದ ನಂತರವೂ ಅಕ್ರಮ ಸಂಬಂಧ ಹೊಂದಿದ್ದ ವಿಜಯ ಕದಂ ಇಂದು ಕೂಡಾ ಮನೆಗೆ ಹೋಗಿದ್ದಾನೆ. ಈ ಸಮಯದಲ್ಲಿ ಪದ್ಮಾ ಈತನನ್ನ ನಿಂದಿಸಿ ಹೊರ ಹಾಕಿದ್ದಾಳೆ. ಅಷ್ಟೇ ಅಲ್ಲ, ಚಾಕು ಹಿಡಿದು ಸಾಯುತ್ತೇನೆ ಎಂದು ಸಿಟ್ಟಾಗಿದ್ದಾಳೆ.

ಇಡೀ ಘಟನೆಯನ್ನ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಅದೀಗ ವೈರಲ್ ಆಗಿದೆ. ಆ ದೃಶ್ಯಗಳು ಕರ್ನಾಟಕವಾಯ್ಸ್.ಕಾಂ ಲಭಿಸಿವೆ.

https://fb.watch/eeAfGlJ_8A/

https://fb.watch/eeAfGlJ_8A/

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಧಾರವಾಡದ ಉಪನಗರ ಠಾಣೆ ಪೊಲೀಸರು ಆರೋಪಿಯನ್ನ ಬಂಧನ ಮಾಡಲಾಗಿದ್ದು, ಪದ್ಮಾಳನ್ನ ಕಿಮ್ಸಗೆ ರವಾನೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *