Posts Slider

Karnataka Voice

Latest Kannada News

ಧಾರವಾಡದ ಬಳಿ “ಕತ್ತು ಕೊಯ್ದು ಪರಾರಿ”- ಯುವಕನ ಸ್ಥಿತಿ ಗಂಭೀರ…

1 min read
Spread the love

ಗಾಯಾಳುವಿನ ಹೆಸರು ನವೀನ ದೊಡ್ಡಮನಿ ಎಂದು ಗುರುತಿಸಲಾಗಿದೆ..

ಧಾರವಾಡ: ನಗರದ ಹೊರವಲಯದ ನುಗ್ಗಿಕೇರಿಯ ಗುಡ್ಡದ ಮೇಲೆ ಯುವಕನೊಬ್ಬನ ಕತ್ತು ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕೆಲವೇ ಕ್ಷಣಗಳ ಹಿಂದೆ ಸಂಭವಿಸಿದೆ.

ಸುಮಾರು 25 ರಿಂದ 28 ವರ್ಷದ ಯುವಕನು ಬೈಕಿನಲ್ಲಿ ಬಂದಿದ್ದು, ಯಾರೋ ಆತನ ಕತ್ತನ್ನ ಕೊಯ್ದು ಪರಾರಿಯಾಗಿದ್ದು, ಗುಡ್ಡದಿಂದ ಕೆಳಗೆ ಬಂದು ರಸ್ತೆಯಲ್ಲಿ ಬಿದ್ದ ಯುವಕನು ತನ್ನ ಪ್ರಾಣವನ್ನ ಉಳಿಸುವಂತೆ ಗೋಗೆರೆಯುತ್ತಿದ್ದಾನೆ.

ದಾರಿ ಹೋಕರು ಭಯದಿಂದ ಆತನ ಬಳಿ ನಿಂತಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಯುವಕನನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಧಾರವಾಡ

ಧಾರವಾಡದಲ್ಲಿ ಯುವಕನ ಕುತ್ತಿಗೆಗೆ ಚಾಕು ಇರಿತ

ಧಾರವಾಡ ಹೊರವಲಯದ ನುಗ್ಗಿಕೇರಿ ಗುಡ್ಡದ ಬಳಿ ನಡೆದ ಘಟನೆ

ನವೀನ್ ದೊಡಮನಿ (೩೦) ಎಂಬುವವನೇ ಚಾಕು ಇರಿತಕ್ಕೆ ಒಳಗಾದವನು

ಹಾವೇರಿ‌ ಮೂಲದ ನವೀನ್

ಗುಡ್ಡದಿಂದ ಕೆಳಗೆ ಬಂದು ಪ್ರಾಣ ಉಳಿಸುವಂತೆ ಗೋಗರೆದ ಯುವಕ

ಯುವಕನ ಸ್ಥಿತಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು

ಸದ್ಯ ಯುವಕನನ್ನ ಧಾರವಾಡದ ಸಿವಿಲ್ ಅಸ್ಪತೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ

ಧಾರವಾಡ ಗ್ರಾಮೀಣ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ರವಾನೆ

ಖಾಸಗಿ‌ ಫೈನಾನ್ಸ್ ಉದ್ಯೋಗಿಯಾಗಿರುವ ನವೀನ್

ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ


Spread the love

Leave a Reply

Your email address will not be published. Required fields are marked *