Posts Slider

Karnataka Voice

Latest Kannada News

“ನಾಲ್ಕ್ ಜನಾ ಸತ್ತು ವಾರ್ ಆತು” ಮಾಲಕ್ ಟ್ರೇಸ್ ಆಗ್ಯಾನಂತ- ಮಂತ್ರಿ ಹಿಡ್ಕೊಂಡು ಬರ್ತಾರಂತ್…!!!

Spread the love

ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದ ಬೆಂಕಿ ಅವಘಡದಲ್ಲಿ ನಾಲ್ಕು ಕಾರ್ಮಿಕರು ಸಾವಿಗೀಡಾಗಿ ವಾರ ಕಳೆದರೂ, ಇನ್ನೂ ಮಾಲೀಕನ ಪತ್ತೆ ಆಗದಿರುವ ಬಗ್ಗೆ ಉತ್ತರಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು, ಮಾಲೀಕನನ್ನ ಹಿಡಿದುಕೊಂಡು ಬರೋದಾಗಿ ಹೇಳಿಕೊಂಡಿದ್ದಾರೆ.

ಸಚಿವ ಹಾಲಪ್ಪ ಆಚಾರ ಹೇಳಿದ್ದೇನು ಗೊತ್ತಾ… ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ..

ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಪಾರ್ಕಲ್ ಪ್ಯಾಕ್ಟರಿಗೆ ಬೆಂಕಿ ತಗುಲಿ ಒಟ್ಟು ನಾಲ್ಕು ಜನರು ಸಾವಿಗೀಡಾಗಿದ್ದಾರೆ. ಅದಾಗಿ ವಾರಗಳೂ ಕಳೆದರೂ ಮಾಲೀಕನ ಬಂಧನ ಮಾಡಲಾಗದೇ, ಮ್ಯಾನೇಜರ್ ಮಂಜುನಾಥ ಎಂಬಾತನನ್ನ ಬಂಧನ ಮಾಡಲಾಗಿದೆ. ಈಗ ನೋಡಿದ್ರೇ ಸಚಿವರು ಮಾಲೀಕ ‘ಟ್ರೇಸ್’ ಆಗಿದ್ದಾನೆಂದೂ… ಹಿಡಿದುಕೊಂಡೂ ಬರುವುದಾಗಿ ಹೇಳುತ್ತಿದ್ದಾರೆ. ಟ್ರೇಸ್ ಆದ ಮೇಲೆ ಹಿಡಿಯೋಕೆ ಯಾಕೆ ತಡ ಎಂಬುದರ ಬಗ್ಗೆ ಸಚಿವರೇನು ಹೇಳುತ್ತಾರೋ..

ಸಚಿವರೇ ಹಿಡಿದುಕೊಂಡು ಬರುವುದಾದರೇ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ರಮೇಶ ಗೋಕಾಕ ಏನ್ ಮಾಡ್ತಾರೋ…


Spread the love

Leave a Reply

Your email address will not be published. Required fields are marked *