ಸರಕಾರ “ಫ್ರೀ ಕೊಟ್ಟು” ಕುಡುಕರನ್ನ ಹೆಚ್ಚಿಸಿದೆ: ಗುಣಧರನಂದಿ ಮಹಾರಾಜ್ರ ವಿವಾದಾತ್ಮಕ ಹೇಳಿಕೆ…!!!

ಹುಬ್ಬಳ್ಳಿ: ರಾಜ್ಯ ಉಚಿತ ಯೋಜನೆಗಳನ್ನ ಜಾರಿಗೆ ಮಾಡಿರುವುದರಿಂದ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶದ ವಾತಾವರಣ ಸಂಪೂರ್ಣ ಹದಗೆಟ್ಟಿದೆ ಎನ್ನುವ ಮೂಲಕ ವಿವಾದ ಸೃಷ್ಟಿಸುವ ಹೇಳಿಕೆಯನ್ನ ವರೂರಿನ ಶ್ರೀ ಗುಣಧರನಂದಿ ಮಹಾರಾಜರು ನೀಡಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ…
ಉಚಿತವಾಗಿ ಕೊಟ್ಟು ಕೊಟ್ಟು ಕುಡುಕರ ಸಂಖ್ಯೆ ಹೆಚ್ಚಾಗಿದೆ. ಹಾಲನ್ನ ಉಚಿತವಾಗಿ ಕೊಡಿ ಎಂದು ಸಲಹೆ ನೀಡಿರುವ ಗುಣಧರನಂದಿ ಮಹಾರಾಜರು, ಮಹಿಳೆಯರನ್ನ ಹೊಡೆಯುವ ಘಟನೆಗಳು ಹಳ್ಳಿಗಳಲ್ಲಿ ನಡೆಯುತ್ತಿವೆ ಎಂದಿದ್ದಾರೆ.