Posts Slider

Karnataka Voice

Latest Kannada News

ಬೆಣ್ಣೆಹಳ್ಳದಲ್ಲಿ ಸಿಲುಕಿಕೊಂಡಿರುವ 7ಕುರಿಗಾಯಿಗಳು- 200ಕ್ಕೂ ಹೆಚ್ಚು ಕುರಿಗಳು… ರಕ್ಷಣೆ ನಿಂತ ತಾಲೂಕಾಡಳಿತ…

Spread the love

ನವಲಗುಂದ: ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ಬೆಣ್ಣೆ ಹಳ್ಳದಲ್ಲಿ ಸುಮಾರು 200 ಕುರಿಗಳು ಹಾಗೂ 7ಜನ ಕುರಿಗಾಯಿಗಳು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ಇಡೀ ತಾಲೂಕಾಡಳಿತವೇ ನಿಂತಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳವೂ ತುಂಬಿ ಬಂದ ಪರಿಣಾಮ, ಕುರಿಗಳ ಸಮೇತ ಕುರಿಗಾಯಿಗಳು ಸಿಲುಕಿದ್ದಾರೆ. ತಕ್ಷಣವೇ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಮಾಹಿತಿ ಲಭಿಸಿದ್ದು, ತಾಲೂಕು ಆಡಳಿತಕ್ಕೆ ಸೂಚನೆಯನ್ನ ನೀಡಿದ್ದಾರೆ.

ಶಾಸಕರ ಸೂಚನೆಯ ಮೇರೆಗೆ ಪ್ರೋಬೆಷನರಿ ಐಎಎಸ್ ಅಧಿಕಾರಿ ಮಾಧವ ಬಿಚ್ಚಿ, ತಹಶೀಲ್ದಾರ ನವೀನ ಹುಲ್ಲೂರ, ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಕಲ್ಮೇಶ ಬೆನ್ನೂರ ಸೇರಿದಂತೆ ಹಲವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಕುರಿಗಾಯಿಗಳಿದ್ದ ಜಾಗಕ್ಕೆ ರಕ್ಷಣೆ ಮಾಡುವ ತಂಡ ತೆರಳಿದೆ.

ಅಲ್ಲಿರುವ ಕುರಿಗಳನ್ನು ಬೋಟಿನಲ್ಲಿ ಹೊರಗೆ ತರುವ ಕಾರ್ಯಾಚರಣೆ ನಡೆದಿದ್ದು, ಯಾರಿಗೂ ತೊಂದರೆಯಾಗದ ಹಾಗೇ ರಕ್ಷಣೆ ಮಾಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *