ಹುಬ್ಬಳ್ಳಿಯಲ್ಲಿ ಮಣ್ಣಿಗಾಗಿ ನಡೀತು ಎಕ್ಸ್ ಕಾರ್ಪೋರೇಟರ್ ಪ್ಯಾಮಿಲಿ ಜೊತೆ ಮಾರಾಮಾರಿ…!

ಹುಬ್ಬಳ್ಳಿ: ಲಾಕ್ ಡೌನ್ ಸಮಯದಲ್ಲಿಯೇ ಹೊಸ ಕಟ್ಟಡ ನಿರ್ಮಾಣ ಮಾಡಿಕೊಂಡ ಸಮಯದಲ್ಲಿ ಬಿದ್ದ ಮಣ್ಣನ್ನ ತೆಗೆಯುವಂತೆ ಹೇಳಿದ ಘಟನೆ ವಿಕೋಪಕ್ಕೆ ಹೋಗಿ ಐವರು ಆಸ್ಪತ್ರೆ ಪಾಲಾಗುವ ಪ್ರಕರಣ ಹುಬ್ಬಳ್ಳಿಯ ಹೊಸಗಬ್ಬೂರ ಪ್ರದೇಶದಲ್ಲಿ ನಡೆದಿದೆ.
ದೊಡ್ಡವಾಡ ಕುಟುಂಬದವರು ಕಟ್ಟಡ ಕಾಮಗಾರಿಯನ್ನ ಮಾಡುತ್ತಿದ್ದು, ಅದರ ಹಿಂದಿನ ಭಾಗದಲ್ಲಿ ಪಾಲಿಕೆಯ ಮಾಜಿ ಸದಸ್ಯ ಬಷೀರ ಗೂಡಮಾಲ್ ಅವರ ಜಾಗವಿದ್ದು, ಆ ರಸ್ತೆಯಲ್ಲಿ ಮಣ್ಣು ಬಿದ್ದಿದೆ. ಈ ಮಣ್ಣನ್ನ ತೆಗೆಯುವ ವಿಷಯಕ್ಕಾಗಿಯೇ ಎರಡು ಕುಟುಂಬಗಳು ಹಿಗ್ಗಾ-ಮುಗ್ಗಾ ಬಡಿದಾಡಿಕೊಂಡಿವೆ.
ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು, ಐವರು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಡಿಸಿಪಿ ಕೆ.ರಾಮರಾಜನ್ ಅವರು, ಕಿಮ್ಸಗೆ ಭೇಟಿ ನೀಡಿ, ಮಾಹಿತಿಯನ್ನ ಪಡೆದರು.
ಘಟನೆಗೆ ಸಂಬಂಧಿಸಿದಂತೆ ಕಸಬಾಪೇಟೆ ಠಾಣೆಯ ಪೊಲೀಸರಿಗೆ ಮುಂದಿನ ಕಾನೂನು ಕ್ರಮವನ್ನ ಜರುಗಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ದೊಡ್ಡವಾಡ ಹಾಗೂ ಗೂಡಮಾಲ್ ಕುಟುಂಬದ ನಡುವೆ ಪರಸ್ಪರ ದೂರು ದಾಖಲಾಗುವ ಸಾಧ್ಯತೆಯಿದೆ.