Posts Slider

Karnataka Voice

Latest Kannada News

ಅಮರಗೋಳ, ಕಟ್ನೂರ, ಮಲ್ಲಿಗವಾಡದಲ್ಲಿ ಮಾರ್ಚ 29ಕ್ಕೆ ಗ್ರಾ.ಪಂ ಚುನಾವಣೆ…!

Spread the love

ಧಾರವಾಡ: ಜಿಲ್ಲೆಯ ಕೆಲವು ಗ್ರಾಮ ಪಂಚಾಯತಿಗಳ ಚುನಾವಣೆಗಳು ವಿವಿಧ ಕಾರಣಗಳಿಂದ ಮಾಡಲಾಗಿರಲಿಲ್ಲ. ಆ ಕಾರಣಕ್ಕಾಗಿ ಮಾರ್ಚ 29ಕ್ಕೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು, ಹುಬ್ಬಳ್ಳಿ ತಾಲೂಕಿನ ಕಿರೇಸೂರಿನ ಒಂದು ಸ್ಥಾನ, ಮಲ್ಲಿಗವಾಡ, ಕಟ್ನೂರ ಗ್ರಾಮದಲ್ಲಿ ಚುನಾವಣೆ ನಡೆಯಲಿದೆ.

ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರ ಸ್ವಂತೂರಾದ ಅಮರಗೋಳದಲ್ಲಿಯೂ ಚುನಾವಣೆ ನಡೆಯಲಿದೆ. ಕುಂದಗೋಳ ತಾಲೂಕಿನ ಮಳಲಿ ಪಂಚಾಯತಿಯ ತೀರ್ಥ ವಾರ್ಡಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ಉಪಚುನಾವಣೆ ಜರುಗುವ ಗ್ರಾಮ ಪಂಚಾಯತಿಗಳಲ್ಲಿ ಮಾರ್ಚ 15ರಿಂದ ಮಾರ್ಚ 31ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತೆ. ಉಪಚುನಾವಣೆ ನಡೆಯುವ ಸ್ಥಾನಗಳಿಗೆ ಮಾರ್ಚ 19ರಂದು ನಾಮಪತ್ರಗಳನ್ನ ಸಲ್ಲಿಸಲು ಕೊನೆಯ ದಿನವಾಗಿದೆ. ಮಾರ್ಚ್ 20ರಂದು ಪರಿಶೀಲನೆ, ಮಾರ್ಚ 22ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.

ಮಾರ್ಚ 29ರಂದು ಮುಂಜಾನೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದ್ದು, ಮರು ಮತದಾನದ ಅಗತ್ಯಬಿದ್ದರೇ ಮಾರ್ಚ 30ರಂದು ನಡೆಸಲಾಗುವುದು. ಮತ ಎಣಿಕೆ ಮಾರ್ಚ 31ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.


Spread the love

Leave a Reply

Your email address will not be published. Required fields are marked *