ಕೊವೀಡ್-19ಗೆ ಪ್ರಾಂಶುಪಾಲ ಸಾವು: ಸರಕಾರದಿಂದ 30 ಲಕ್ಷ ಬಿಡುಗಡೆ
1 min readಬೆಂಗಳೂರು: ಶಿಕ್ಷಕರು ಕೊರೋನಾ ವಾರಿಯರ್ಸ್ ಎಂದುಕೊಳ್ಳಬೇಕೆಂದು ಬೇಡಿಕೆ ಮುಂದುವರೆದಿರುವಾಗಲೇ ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾದ ಪ್ರಾಂಶುಪಾಲರಿಗೆ 30 ಲಕ್ಷ ರೂಪಾಯಿ ಹಣವನ್ನ ಪರಿಹಾರವಾಗಿ ರಾಜ್ಯ ಸರಕಾರ ನೀಡಿದ್ದು, ಪ್ರತಿ ಕರ್ನಾಟಕವಾಯ್ಸ್ ಗೆ ಲಭಿಸಿದೆ.
ಹಾವೇರಿ ಜಿಲ್ಲೆಯ ಹಾನಗಲ ತಾಲೂಕಿನ ಮಾರನಬೀಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಪ್ಪ ಫಕ್ಕೀರಪ್ಪ ತಳಗಡಿ ಕೊರೋನಾ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿದ್ದಾರೆ. ಹೀಗಾಗಿ ಅವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನ ನೀಡಲು ಕೋರಿರುವ ಆದೇಶ ಪ್ರತಿಯಿದು.
ಕೊರೋನಾ ವೈರಸ್ ನಿಂದ ಸಾವಿಗೀಡಾಗಿರುವ ಪ್ರಾಂಶುಪಾಲರ ಹಣವನ್ನ, ಅವರ ಪತ್ನಿ ಅಥವಾ ಅವರಿಗೆ ನಾಮೀನಿಯಾಗಿದ್ದವರಿಗೆ ನೀಡಬೇಕೆಂದು ಕೂಡಾ ಆದೇಶ ನೀಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪಿ.ಎನ್.ನಾಗರಾಜ ಸಮಗ್ರವಾದ ಆದೇಶವನ್ನ ಹೊರಡಿಸಿದ್ದಾರೆ.