ಗೋವನಕೊಪ್ಪದ ಬಳಿ ಹತ್ಯೆಯಾದವನು ಧಾರವಾಡದ ಹರೀಶ ಶಿಂಧೆ…!!!

ಧಾರವಾಡ: ನವಲಗುಂದ ರಸ್ತೆಯ ಗೋವನಕೊಪ್ಪದ ಬಳಿಯ ಲೇ ಔಟ್ವೊಂದರಲ್ಲಿ ಕೊಲೆಯಾದ ಯುವಕನ ಮಾಹಿತಿ ಪತ್ತೆ ಹಚ್ಚುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸ್ಕೂಟಿಯೊಂದನ್ನ ಸ್ಥಳದಲ್ಲಿಟ್ಟಿದ್ದು, ಅಂಗಾತ ಬಿದ್ದಿರುವ ಶವ ಧಾರವಾಡ ಮಣಕಿಲ್ಲಾ ನಿವಾಸಿ ಹರೀಶ ಶಿಂಧೆ ಎಂದು ಪತ್ತೆ ಹಚ್ಚಲಾಗಿದೆ.
ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರು ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಘಟನೆಯ ಹಿಂದಿನ ರಹಸ್ಯ ಬಯಲಿಗೆ ಕಾರ್ಯೋನ್ಮುಖರಾಗಿದ್ದಾರೆ.