ಇಂಗಳಹಳ್ಳಿ “ಜೆಜೆಎಂ ಗೋಲ್ಮಾಲ್” CEO ಕಚೇರಿ ಮುಂದೆ ಆಮರಣ ಉಪವಾಸದ ಎಚ್ಚರಿಕೆ…

ಹುಬ್ಬಳ್ಳಿ: ಜಲಜೀವನ ಮಿಷನ್ ಅಡಿಯ ಕಾಮಗಾರಿಯಲ್ಲಿ ನಡೆದಿರುವ ಗೋಲ್ಮಾಲ್ ಬಗ್ಗೆ ಯಾವುದೇ ಕ್ರಮ ಜರುಗಿಸದ ಸಿಇಓ ಕಚೇರಿ ಮುಂದೆ ಆಮರಣ ಉಪವಾಸ ನಡೆಸಲು ಗ್ರಾಮದ ಪ್ರಮುಖರು ಮುಂದಾಗಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಗ್ರಾಮದ ಮಲ್ಲಪ್ಪ ಹಳಕಟ್ಟಿಯವರು, ಅಧಿಕಾರಿಗಳು ಕಿಕ್ಬ್ಯಾಕ್ ಹಣ ಪಡೆದಿರುವುದು ಜಾಣ ಮೌನದಿಂದ ಗೊತ್ತಾಗಿದೆ. ಈ ಬಗ್ಗೆ ನಿಖರವಾದ ಉತ್ತರ ನೀಡದೇ ಇದ್ದರೇ ಧಾರವಾಡ ಸಿಇಓ ಕಚೇರಿ ಎದುರು ಆಮರಣ ಉಪವಾಸ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವೀಡಿಯೋ..
ಗ್ರಾಮದಲ್ಲಿ ನಡೆದಿರುವ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಮನವಿ ಕೊಟ್ಟರೂ, ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಇಂತಹ ತೀರ್ಮಾನಕ್ಕೆ ಬಂದಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.