Posts Slider

Karnataka Voice

Latest Kannada News

ಧಾರವಾಡ ಭಾರತಿನಗರದಲ್ಲಿ ಸರಗಳ್ಳತನ

Spread the love

ಧಾರವಾಡ: ಭಾರತಿನಗರದ ಬಳಿಯಿರುವ ಪ್ರತಿಭಾ ಕಾಲನಿಯಲ್ಲಿ ವಾಕಿಂಗ್ ಹೋದ ಮಹಿಳೆಯ ಬಂಗಾರದ ಸರವನ್ನ ದೋಚಿಕೊಂಡು ಪರಾರಿಯಾದ ಘಟನೆ ಗುರುವಾರ ಬೆಳಕಿನ ಜಾವ ನಡೆದಿದೆ.

ಮಹದೇವಕ್ಕ ಸಣ್ಣೇರ ಎಂಬುವವರು ಬೆಳಿಗ್ಗೆ ವಾಕಿಂಗ್ ಹೋದ ಸಮಯದಲ್ಲಿ ಬೈಕಿನಲ್ಲಿ ಬಂದ್ ಇಬ್ಬರು, 30 ಗ್ರಾಂದ ಬಂಗಾರದ ಸರವನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಉಪನಗರ ಠಾಣೆಯ ಪೊಲೀಸರು, ಮಾಹಿತಿಯನ್ನ ಸಂಗ್ರಹಿಸಿ, ಸರಗಳ್ಳರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.

ಸರಗಳ್ಳರ ಬಗ್ಗೆ ಡಿಸಿಪಿ ಕೆ.ರಾಮರಾಜನ್ ಅವರು ಮಾಹಿತಿಯನ್ನ ಪಡೆದಿದ್ದು, ಆ ಭಾಗದಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *