ಹುಬ್ಬಳ್ಳಿಯಲ್ಲಿ ಹಾಡುಹಗಲೇ 26 ಲಕ್ಷ ಲೂಟಿ ಮಾಡಿದ್ದ ಮೂವರನ್ನ “ಹೆಡಮುರಿ” ಕಟ್ಟಿದ PI ನೀಲಮ್ಮನವರ ಟೀಂ…

*Exclsuive*
ಹುಬ್ಬಳ್ಳಿಯಲ್ಲಿ ಹಾಡುಹಗಲೇ 26 ಲಕ್ಷ ದರೋಡೆಯ 3 ಆರೋಪಿಗಳನ್ನು; 6ದಿನದಲ್ಲಿ ಕಂಬಿ ಹಿಂದೆ ತಳ್ಳಿದ ಇನ್ಸಪೆಕ್ಟರ್ ಪ್ರವೀಣ ನೀಲಮ್ಮನವರ
ಹುಬ್ಬಳ್ಳಿ: ನಗರದಲ್ಲಿ ಹಾಡಹಗಲೇ ನಡೆದಿದ್ದ 26 ಲಕ್ಷ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಹೆಡೆಮುರಿಗೆ ಕಟ್ಟಿ ಕಂಬಿ ಹಿಂದೆ ತಳ್ಳುವಲ್ಲಿ ಗೋಕುಲ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ 6 ದಿನಗಳ ಹಿಂದೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಸೆಕ್ಯೂರ್ ಆಸ್ಪತ್ರೆಯ ಮುಂಬಾಗದಲ್ಲಿ ಪೂನಾ ಮೂಲದ ಉದ್ಯಮಿ ಧೀರಜ ಎಂಬುವವರಿಗೆ 300 ಜನ ಕಾರ್ಮಿಕರನ್ನು ಒದಗಿಸಿ ಕೊಡುತ್ತೇವೆ ಎಂದು ಹುಬ್ಬಳ್ಳಿಗೆ ಕರೆಸಿ ಅವರ ಕಾರಿನಲ್ಲಿದ್ದ 26 ಲಕ್ಷ ಹಣವಿದ್ದ ಬ್ಯಾಗ್ನ್ನ ದರೋಡೆ ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೋಕುಲ್ ಠಾಣೆಯ ಇನ್ಸ್ಪೆಕ್ಟರ್ ಪ್ರವೀಣ ನೀಲಮ್ಮನವರ ಆಂಡ್ ಟೀಂ ಖಚಿತ ಮಾಹಿತಿಯನ್ನು ಕಲೆ ಹಾಕಿ ಹುಬ್ಬಳ್ಳಿಯ ಇಬ್ಬರು ಹಾಗೂ ಮುಂಡಗೋಡ ಮೂಲದ ಓರ್ವ ಸೇರಿದಂತೆ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ದರೋಡೆ ಮಾಡಲು ಬಳಸಿದ್ದ ಹೋಂಡಾ ಡಿಯೋ ಬೈಕ್ ಹಾಗೂ ದರೋಡೆ ಮಾಡಿದ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ದರೋಡೆ ಪ್ರಕರಣವನ್ನು ಬೇಧಿಸಿದ ಗೋಕುಲ್ ಠಾಣೆಯ ಇನ್ಸಪೆಕ್ಟರ್ ಪ್ರವೀಣ ನೀಲಮನ್ನವರ ಆಂಡ್ ಟೀಂ ಗೆ ಕಮೀಷನರ್ ರೇಣುಕಾ ಸುಕುಮಾರ, ಡಿಸಿಪಿಗಳಾದ ಎಂ. ರಾಜೀವ್ ಹಾಗೂ ಗೋಪಾಲ್ ಬ್ಯಾಕೋಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.