Posts Slider

Karnataka Voice

Latest Kannada News

ನನ್ನ ತಮ್ಮ-ನನ್ನ ಮಗ ಕೂಡಾ ಎಂಎಲ್ಸಿ ಆಕಾಂಕ್ಷಿ: ಬಿಜೆಪಿ ಸಂಸದ ಜಿ.ಎಂ.ಸಿದ್ಧೇಶ್ವರ

Spread the love

ದಾವಣಗೆರೆ: ಜಿಲ್ಲೆಗೆ ಈ ಬಾರಿ ಒಂದು ಎಂಎಲ್ಸಿ ಸ್ಥಾನ ಸಿಗೋದು ಪಕ್ಕಾ. ಜಿಲ್ಲೆಯಿಂದ ಯಶವಂತ್ ರಾವ್ ಜಾದವ್,  ಅಂಬರ್ ಕರ್ ಆಕಾಂಕ್ಷಿಗಳಿದ್ದಾರೆ. ನನ್ನ ತಮ್ಮ, ನನ್ನ ಮಗನೂ ಆಕಾಂಕ್ಷಿಯಾಗಿದ್ದಾರೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.

ಎಲ್ರಿಗೂ ಎಂಎಲ್ ಸಿ ಆಗಬೇಕೆಂಬ ಆಸೆ ಇದೆ. ಪಟ್ಟಿ ದೊಡ್ಡದಿದೆ. ಈ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಪೂರ್ಣ ವಿಶ್ವಾಸ ಇದೆ ದಾವಣಗೆರೆಗೆ ಈ ಭಾರೀ ಎಂಎಲ್ ಸಿ ಸಿಗುತ್ತೆ. ಹೈಕಮಾಂಡ್ ಸಿಎಂ ಮಾತು ಕೇಳಲ್ಲ ಅನ್ನೋದು ತಪ್ಪು ಗ್ರಹಿಕೆ. ಸಿಎಂ ಕೇಳೇ ರಾಜ್ಯಸಭಾ ಆಯ್ಕೆ ನಡೆದಿದೆ. ಪರಿಷತ್ ಆಯ್ಕೆಯೂ ಸಹ ಸಿಎಂ ಮಾತಿನಂತೆ ನಡೆಯುತ್ತೆ. ಹೈಕಮಾಂಡ್ ಹೇಳಿದೆ ಸಿಎಂ ಬದಲಾವಣೆ ಇಲ್ಲ ಎಂದು. ಹೀಗಾಗಿ ಸಿಎಂ ಬಿಎಸ್ ವೈ ಅವರ ಮಾತೇ ನಡೆಯುವುದೆಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.


Spread the love

Leave a Reply

Your email address will not be published. Required fields are marked *