Posts Slider

Karnataka Voice

Latest Kannada News

ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಐವರ ರಕ್ಷಣೆ: ಎಕ್ಸ್‌ಕ್ಲೂಸಿವ್ ವೀಡಿಯೋ

1 min read
Spread the love

ಕಲಬುರಗಿ: ನಿರಂತರವಾಗಿ ಸುತಿದ ಮಳೆಯಿಂದ ತುಂಬಿ ಹರಿಯುತ್ತಿದ್ದ ಬಡದಾಳ ಹಳ್ಳದಲ್ಲಿ ಓಮನಿ ಜೊತೆಗೆ ಕೊಚ್ಚಿಕೊಂಡು ಹೋಗಬೇಕಿದ್ದ ಐವರನ್ನ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ನಡೆದಿದೆ.

ಹಳ್ಳವನ್ನ ದಾಟಲು ಹೋಗಿದ್ದ ಐವರು ತಮ್ಮ ವಾಹನದ ಸಮೇತ ನೀರಿನಲ್ಲಿ ಸಿಲುಕಿಕೊಂಡಿದ್ದರು. ವಾಹನದ ಬಹುಭಾಗ ನೀರಲ್ಲಿ ಮುಳುಗಿದಾಗ, ಅದ್ರಲ್ಲಿದ್ದ ಐವರು ಅದೇ ವಾಹನ ಹಿಡಿದುಕೊಂಡು ಜೀವದಾಟದಲ್ಲಿ ಮುಳುಗಿದ್ದರು. ಇದನ್ನ ನೋಡಿದ ಗ್ರಾಮಸ್ಥರು ತಕ್ಷಣವೇ ಹಗ್ಗದ ವ್ಯವಸ್ಥೆ ಮಾಡಿಕೊಂಡು ಐವರನ್ನ ಬದುಕಿಸಿದ್ದಾರೆ.

ಬಡದಾಳ ಗ್ರಾಮದ ಯುವಕರ ಕಾರ್ಯವನ್ನ ಪ್ರತಿಯೊಬ್ಬರು ಶ್ಲಾಘಿಸುತ್ತಿದ್ದು, ಬದುಕುಳಿದ ಐವರು ಗ್ರಾಮಸ್ಥರಿಗೆ ಋಣಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed