Posts Slider

Karnataka Voice

Latest Kannada News

ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿಯವರ ನಿವಾಸಕ್ಕೆ ರಾಜ್ಯಪಾಲರ ಭೇಟಿ: ದಾಕ್ಷಾಯಣಿಯವರಿಗೆ ಶ್ರದ್ಧಾಂಜಲಿ…

1 min read
Spread the love

ಹುಬ್ಬಳ್ಳಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಹುಬ್ಬಳ್ಳಿಯ ಗ್ರೀನ್ ಗಾರ್ಡನ್ ನಲ್ಲಿರುವ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ವಿ.ಪಟ್ಟಣಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿ, ಬುಧವಾರ ನಿಧನ ಹೊಂದಿದ ಅವರ ಪತ್ನಿ ಶ್ರೀಮತಿ ದಾಕ್ಷಾಯಣಿ ಪಟ್ಟಣಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹುಬ್ಬಳ್ಳಿ-ಧಾರವಾಡ ಭೇಟಿಯ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಗೆಹ್ಲೊಟ್ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಪಟ್ಟಣಶೆಟ್ಟಿ ಅವರ ನಿವಾಸಕ್ಕೆ ತೆರಳಿ, ಶ್ರೀಮತಿ ದಾಕ್ಷಾಯಣಿ ಅವರ ಭಾವಚಿತ್ರಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು.

ಶ್ರೀಮತಿ ದಾಕ್ಷಾಯಣಿ ಪಟ್ಟಣಶೆಟ್ಟಿ ಅವರ ಪುತ್ರಿಯಾದ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ, ಅಳಿಯಂದಿರಾದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್, ಪುತ್ರರಾದ ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ ಹಾಗೂ ಕುಟುಂಬದ ಇತರ ಸದಸ್ಯರಿಗೆ ಸಾಂತ್ವನ ಹೇಳಿದರು.
ರಾಜ್ಯಪಾಲರ ಆಪ್ತ ಕಾರ್ಯದರ್ಶಿ ಪಂಕಜ್ ಕುಮಾರ್ ಮೆಹ್ತಾ, ಎಡಿಸಿ ಸಂದೀಪ್ ಶರ್ಮ, ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ, ಪ್ರೊ.ಸಿ.ಬಸವರಾಜು, ಪ್ರೊ. ಪಿ.ಎಲ್.ಪಾಟೀಲ ಸೇರಿದಂತೆ ಮತ್ತಿತರ ಅಧಿಕಾರಿಗಳು ರಾಜ್ಯಪಾಲರ ಜತೆಗಿದ್ದರು.


Spread the love

Leave a Reply

Your email address will not be published. Required fields are marked *