Posts Slider

Karnataka Voice

Latest Kannada News

ಗ್ರೀನ್ ದಾಬಾ ಬಳಿ ದರೋಡೆ- ಕಿತ್ತೂರ, ಮಲ್ಲಾಪುರ “6” ಆರೋಪಿಗಳನ್ನ “24” ಗಂಟೆಯಲ್ಲಿ ಬಂಧಿಸಿದ ಗರಗ ಠಾಣೆ ಪೊಲೀಸರು…

1 min read
Spread the love

ಧಾರವಾಡ: ತಾಲೂಕಿನ ಹೊಸತೇಗೂರ ಬಳಿ ದರೋಡೆ ಮಾಡಿ ಪರಾರಿಯಾಗಿದ್ದ ಆರು ಆರೋಪಿಗಳನ್ನ 24 ಗಂಟೆಯಲ್ಲಿಯೇ ಬಂಧನ ಮಾಡುವಲ್ಲಿ ಗರಗ ಠಾಣೆಯ ಸಿಪಿಐ ಸಮೀರ ಮುಲ್ಲಾ ನೇತೃತ್ವದ ತಂಡ ಯಶಸ್ವಿಯಾಗಿದೆ.

ಆರೋಪಿಗಳ ಎಕ್ಸಕ್ಲೂಸಿವ್ ವೀಡಿಯೋ…

ಮೊನ್ನೆ ರಾತ್ರಿ ಗ್ರೀನ ದಾಬಾದ ಬಳಿ ದರೋಡೆ ಮಾಡಿದ್ದ ಕಿತ್ತೂರಿನ ನವೀನ ಹುಣಶ್ಯಾಳ, ಸಂತೋಷ ಬಿಡಿಮಠ, ಅಕ್ಷಯ ಕೋಳಿ, ಸಾಗರ ಗುಂಜಿ ಹಾಗೂ ಮಲ್ಲಾಪುರದ ವಿರುಪಾಕ್ಷ ಎಮ್ಮಿ, ಸಾಗರ ಗುಂಜಿ ಎಂಬುವರನ್ನ ಬಂಧಿಸಲಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.

ಬಂಧಿತರಿಂದ 25 ಸಾವಿರ ರೂಪಾಯಿ ಹಣ ಹಾಗೂ ಕೃತ್ಯಕ್ಕೆ ಬಳಸಿದ ಅರ್ಟಿಗಾ ಕಾರನ್ನ ವಶಕ್ಕೆ ಪಡೆಯಲಾಗಿದೆ.
ಸಿಪಿಐ ಸಮೀರ ಮುಲ್ಲಾ ನೇತೃತ್ವದಲ್ಲಿ ಪಿಎಸ್ಐ ಸಿದ್ಧರಾಮಪ್ಪ ಉನ್ನದ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.


Spread the love

Leave a Reply

Your email address will not be published. Required fields are marked *