‘ಹಾಡುಹಗಲೇ’ ಗರಗದಲ್ಲಿ ಮನೆಗೆ ನುಗ್ಗಿ “ಚಾಕು-ತಲ್ವಾರ್”ನಿಂದ ಕೊಚ್ಚಿ ಭಯಾನಕ ಹತ್ಯೆ…!!!

ಧಾರವಾಡ: ಮನೆಯಲ್ಲಿ ಕೂತಾಗಲೇ ಒಳನುಗ್ಗಿರುವ ಆಗುಂತಕರು ವ್ಯಕ್ತಿಯೊಬ್ಬನನ್ನ ಚಾಕು, ತಲ್ವಾರನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಧಾರವಾಡ ತಾಲೂಕಿನ ಗರಗದಲ್ಲಿ ಸಂಭವಿಸಿದೆ.
ಗಿರೀಶ ಮಹದೇವಪ್ಪ ಕರಡಿಗುಡ್ಡ ಎಂಬ ವ್ಯಕ್ತಿಯನ್ನ ಹಾಡುಹಗಲೇ ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದ್ದು, ಘಟನೆಯಿಂದ ಗರಗ ಗ್ರಾಮ ಬೆಚ್ಚಿಬಿದ್ದಿದೆ.
ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕೆಲಸಗಳನ್ನ ಮಾಡುತ್ತಿದ್ದ ಗಿರೀಶನಿಗೆ ಯಾವ ವೈರಿಯಿದ್ದ ಎಂಬುದನ್ನ ಈಗ ಪೊಲೀಸರು ಪತ್ತೆ ಹಚ್ಚಬೇಕಿದೆ.
ಗಿರೀಶನ ಹತ್ಯೆಯ ಹಿಂದೆ ‘ಚಟ’ ಇದೇಯಾ ಅಥವಾ ಹಣಕಾಸಿನ ವ್ಯವಹಾರವಿತ್ತಾ ಎಂಬುದನ್ನ ಗರಗ ಠಾಣೆಯ ಪೊಲೀಸರು ಪತ್ತೆ ಹಚ್ಚಬೇಕಿದೆ.