ಸಿಂಗನಳ್ಳಿ ಬಳಿ ರಸ್ತೆ ಅಪಘಾತ- ಬೇಲೂರಿನ ಇಬ್ಬರ ದುರ್ಮರಣ…!

ಧಾರವಾಡ: ಮುಂದೆ ಹೋಗುತ್ತಿದ್ದ ಬೈಕಿಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಧಾರವಾಡ ತಾಲೂಕಿನ ಬೇಲೂರ ಗ್ರಾಮದ ಇಬ್ಬರು ಸಾವಿಗೀಡಾದ ಘಟನೆ ಸಂಭವಿಸಿದೆ.

ಬೈಕಿನಲ್ಲಿದ್ದ ಬೇಲೂರ ಗ್ರಾಮದ ಮಡಿವಾಳೆಪ್ಪ ಬಸಪ್ಪ ಪೂಜಾರ ಹಾಗೂ ಮಹದೇವ ಸಹದೇವಪ್ಪ ಲಕ್ಕಣ್ಣನವರ ಗೂಡ್ಸ್ ವಾಹನದ ಡಿಕ್ಕಿಯಿಂದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಅಪಘಾತದ ರಭಸಕ್ಕೆ ಎರಡು ದೇಹಗಳು ರಸ್ತೆಯ ಬೇರೆ ಬೇರೆ ಜಾಗದಲ್ಲಿ ಬಿದ್ದಿದ್ದವು. ಬೈಕಿನ ಒಂದು ಚಕ್ರ ತುಂಡರಿಸಿ, ರಸ್ತೆಯಲ್ಲಿ ಬಿದ್ದಿತ್ತು.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಆಗಮಿಸಿದ ಗರಗ ಠಾಣೆಯ ಪೊಲೀಸರು, ಶವಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.