Posts Slider

Karnataka Voice

Latest Kannada News

ಕೆಎಲ್ಇ ಹೊಸ ಮೆಡಿಕಲ್ ಕಾಲೇಜ್ ಗ್ರೌಂಡಿನಲ್ಲೇ ಗಾಂಜಾ ಬೆಳೆದ “ಐವರು” ಅಂದರ್….!

1 min read
Spread the love

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ನಿರ್ಮಾಣ ಹಂತದಲ್ಲಿರುವ ಸ್ಥಳದಲ್ಲಿಯೇ ಗಾಂಜಾ ಬೆಳೆದ ಪ್ರಕರಣವನ್ನ ಕಸಬಾಪೇಟೆ ಠಾಣೆಯ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

praposal building

ಪಶ್ಚಿಮ ಬಂಗಾಳದ ಕಾರ್ಮಿಕರು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದು, ಅಲ್ಲಿಯೇ ಗಾಂಜಾ ಬೆಳೆದಿದ್ದರಂತೆ. ಸುಮಾರು 2ಕೆಜಿಯಷ್ಟು ಹಸಿ ಗಾಂಜಾದ ಸಮೇತ ಐವರನ್ನ ಪೊಲೀಸರು ಬಂಧನ ಮಾಡಿದ್ದಾರೆ.

ಕಳೆದ ಎರಡ್ಮೂರು ತಿಂಗಳ ಹಿಂದೇನೆ ಗಾಂಜಾ ಬೆಳೆದಿದ್ದರೆಂದು ಗೊತ್ತಾಗಿದೆ. ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.


Spread the love

Leave a Reply

Your email address will not be published. Required fields are marked *