Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಗಣೇಶನ ಕದ್ದವನಿಗೆ ‘ಕಜ್ಜಾಯ’ ಕೊಟ್ಟ ಜನ…!

Spread the love

ಹುಬ್ಬಳ್ಳಿ: ನಗರದಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿರುವ ಸಮಯದಲ್ಲೂ ಕಳ್ಳನೋರ್ವ ಗಣೇಶನ ಮೂರ್ತಿಯನ್ನ ಕದಿಯಲು ಹೋಗಿ, ಜನರಿಂದ ಕಜ್ಜಾಯ ಸ್ವೀಕರಿಸಿದ ಘಟನೆ ಬಮ್ಮಾಪೂರ ಓಣಿಯಲ್ಲಿ ನಡೆದಿದೆ.

ಸಾರ್ವಜನಿಕವಾಗಿ ಗಣೇಶನನ್ನ ಮಾರಾಟ ಮಾಡುತ್ತಿದ್ದ ಸಮಯದಲ್ಲಿಯೇ ಬೆಲೆಬಾಳುವ ಮೂರ್ತಿಯನ್ನ ಎಗರಿಸಿಕೊಂಡು ಹೋಗಲು ಮುಂದಾಗಿದ್ದ ರಾಜು ಎಂಬ ಯುವಕನಿಗೆ ಸ್ಥಳೀಯರು ಥಳಿಸಿದ್ದಾರೆ.

ರಾಜುನ ಕೃತ್ಯದಿಂದ ಕೆಲಕಾಲ ಈ ಪ್ರದೇಶದಲ್ಲಿ ಗೊಂದಲವುಂಟಾಗಿತ್ತು. ಜನಜಂಗುಳಿಯ ನಡುವೆಯೇ ಗಣೇಶನ ಕಳ್ಳ ತಪ್ಪಿಸಿಕೊಂಡ ಹೋದದ್ದು ಆಗಿದೆ. ನಗರದಲ್ಲಿನ ಸಂಭ್ರಮಕ್ಕೆ ಈ ಘಟನೆಯೊಂದು ಕಪ್ಪು ಚುಕ್ಕೆಯಾಗಿತ್ತು.


Spread the love

Leave a Reply

Your email address will not be published. Required fields are marked *

You may have missed