ಹುಬ್ಬಳ್ಳಿಯ ಅಸ್ವಸ್ಥ ಭಿಕ್ಷುಕನ ಬಳಿ ಕಂತೆ ಕಂತೆ ಹಣ….!
1 min readಹುಬ್ಬಳ್ಳಿ: ನಗರದ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದವನ ಬಳಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಆತನೀಗ ಹುಬ್ಬಳ್ಳಿಯ ಕಿಮ್ಸನಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಾಳಿ ದುರ್ಗಮ್ಮನ ದೇವಸ್ಥಾನದ ಬಳಿ ಭಿಕ್ಷುಕನೋರ್ವ ಅಸ್ವಸ್ಥನಾಗಿ ಬಿದ್ದಿದ್ದಾನೆಂಬ ಮಾಹಿತಿಯ ಮೇರೆಗೆ ಆತನನ್ನ ಕಿಮ್ಸಗೆ ದಾಖಲು ಮಾಡಿ, ಆತನಲ್ಲಿನ ಚೀಲವನ್ನ ಪರಿಶೀಲನೆ ನಡೆಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಿಕ್ಷುಕನಿಗೆ ಹಣವನ್ನ ಸಿಬ್ಬಂದಿಗಳು ಮರಳಿಸಿದ್ದು, ಆತನ ಆರೋಗ್ಯದಲ್ಲೂ ಸುಧಾರಣೆ ಕಂಡು ಬಂದಿದೆ. ವಾಣಿಜ್ಯನಗರದಲ್ಲಿ ಭಿಕ್ಷುಕನ ಬಳಿ ಇಷ್ಟೊಂದು ಹಣ ಕಂಡು ಬಂದಿದ್ದು, ಇದೇ ಮೊದಲು.