“ಗಡಿಯಾರದಲ್ಲಿ” ಸ್ಟಾರ್ ನಟರ ದಂಡು- EXCLUSIVE

ಬೆಂಗಳೂರು: ಸ್ಯಾಂಡಲ್ ವುಡ್ ನ ವಿಭಿನ್ನ ಹಾಗೂ ಬಹುನಿರೀಕ್ಷಿತ ಸಿನೆಮಾವಾಗಿರುವ ಗಡಿಯಾರ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಪಕ್ಕಾ ಕಮರ್ಷಿಯಲ್ ಚಿತ್ರವಾಗಿರುವ “ಗಡಿಯಾರದಲ್ಲಿ” ಸ್ಟಾರ್ ನಟರ ದಂಡೇ ಇದೆ. ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ರಾಜ್ ದೀಪಕ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟರ ತಾರಾಬಳಗವೇ ಚಿತ್ರದಲ್ಲಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಸೆನ್ಸಾರ್ ಮಂಡಳಿಯಿಂದ ಪ್ರಶಂಸೆಯೊಂದಿಗೆ ” ಯು /ಎ ” ಸರ್ಟಿಫಿಕೇಟ್ ಪಡೆದುಕೊಂಡಿದ್ದು ರಿಲೀಸ್ ಗೆ ರೆಡಿಯಾಗಿದೆ.
ವಿಭಿನ್ನ ಕಥಾಹಂದರವಿರುವ ” ಗಡಿಯಾರ ” ಚಿತ್ರ , ಪೋಸ್ಟರ್ ಹಾಗೂ ಟೈಟಲ್ ನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿ ಸಿನಿಪ್ರಿಯರು ತೆರೆಗಪ್ಪಳಿಸುವುದನ್ನೇ ಕಾತುರದಿಂದ ಕಾಯುವಂತೆ ಮಾಡಿದೆ. ಮತ್ತೊಂದೆಡೆ ಚಿತ್ರದ ಡಬ್ಬಿಂಗ್ ರೈಟ್ಸ್ ಗಾಗಿ ಹಿಂದಿ, ತಮಿಳು, ತೆಲುಗು, ಮಳಯಾಲಂ, ಭಾಷೆಗಳಲ್ಲಿ ಬಾರೀ ಡಿಮ್ಯಾಂಡ್ ಬಂದಿದೆ ಮತ್ತು ಈಗಾಗಲೇ ಮಾತುಕತೆ ಕೂಡ ಆಗಿದೆ .
ಕರಾವಳಿಯ ಮೂಲದವರಾದ ಪ್ರಬಿಕ್ ಮೊಗವೀರ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಖುದ್ದು ಬಂಡವಾಳ ಹೂಡಿದ್ದಾರೆ. ಅಲ್ಲದೇ ಕಥೆ – ಚಿತ್ರಕಥೆ – ಸಂಭಾಷಣೆಯನ್ನೂ ಅವರೇ ಬರೆದಿರೋದು ವಿಶೇಷ . ದೀಪಿಕಾ ವಿನಯ್ ಕುಮಾರ್ ರಾವ್ ಮತ್ತು ಲಾವಣ್ಯ ಲೀಲಾಮೋಹನ ಅವರ ಸಹಕಾರದೊಂದಿಗೆ “ಆತ್ಮಸಿನಿಮಾಸ್ ” ಸಂಸ್ಥೆಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಈ ಚಿತ್ರದಲ್ಲಿ ಮಾಜಿ ಪೊಲೀಸ್ ಕಮಿಷನರ್ ಸಾಂಗ್ಲಿಯಾನ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಯಶ್ ಶೆಟ್ಟಿ” ವಿಶೇಷ ಅಭಿನಯ ಕೂಡ ಈ ಚಿತ್ರಕ್ಕಿದೆ. ಜೊತೆಗೆ ಮಲಯಾಳಂ ನಟ ” ರಿಹಾಜ್ ಎಮ್ ಟಿ “, ಹಿಂದಿ ಚಿತ್ರರಂಗದ ನಟ “ಗೌರಿ ಶಂಕರ್ ” ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ .
ಚಿತ್ರದ ಫಸ್ಟ್ ಲುಕ್ ನ್ನು ಸಿಎಂ ಬಿ ಎಸ್ ಯಡಿಯೂರಪ್ಪನವರು ರಿಲೀಸ್ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದರು. ಬಳಿಕ ಚಿತ್ರದ ಮತ್ತೊಂದು ಪೋಸ್ಟರ್ ನ್ನು ಸಚಿವ ವಿ ಸೋಮಣ್ಣ ಲೋಕಾರ್ಪಣೆಗೊಳಿಸಿದ್ದರು. ಶೀರ್ಷಿಕೆ ಅನಾವರಣವನ್ನು Ex Commissioner & SP ಎಸ್ ಪಿ ಸಾಂಗ್ಲಿಯಾನ, Superintendent Of Police ಪ್ರಭಾಕರ್ ಬಾರ್ಕಿ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು. ಇತ್ತೀಚಿಗೆ ಇನ್ನೊಂದು Poster ಅನ್ನು Assistant Commissioner of Police ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದ್ದರು.
ಆತ್ಮ ಸಿನೆಮಾಸ್ ಬ್ಯಾನರ್ ನ ಅಡಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮಂದೀಪ ರಾಯ್, ಪ್ರಣಯ ಮೂರ್ತಿ, ರಾಜ್ ಮುನಿ, DYSP ಚಬ್ಬಿ, ಮೋಕ್ಷಗೊಂಡಂ ರಾಘವೇಂದ್ರ, ಶ್ರೀನಿವಾಸ್ ಜಿ, ಶಿವಕುಮಾರ್ ನಗರ್ ನವಿಲೆ, ವಿನಯ್ ಕುಮಾರ್ ರಾವ್, ಲೀಲಾ ಮೋಹನ್, ಸಂತೋಷ್ ಗೌಡ, ದೇವರಾಜ್, ಸಂಕಲ್ಪ್ , ಸಚಿನ್ ಪುರೋಹಿತ್, ವಿಕಾಸ್, ಶರ್ಮಿತಾ ಶೆಟ್ಟಿ, ಸುರಕ್ಷಿತ್ ಶೆಟ್ಟಿ, ಸ್ಪೋರ್ತಿ ಕರಡಿ, ದಬಾಂಗನಾ ಚೌಧ್ರಿ, ಪ್ರಿಯದರ್ಶನಿ ಗೌಡ, ಅರ್ಪಿತಾ ವೇಣೂರ್, ಶಿವಮೊಗ್ಗ ರಾಮಣ್ಣಸೇರಿದಂತೆ ಅನೇಕರ ತಾರಾಬಳಗವಿದೆ.
ಚಿತ್ರದಲ್ಲಿ ಅದ್ಭುತ ಹಾಡುಗಳು ಮೂಡಿಬಂದಿದ್ದು, ರಾಘವ್ ಸುಭಾಷ್ ಹಾಡುಗಳ ಸಂಗೀತ ನೀಡಿದ್ದಾರೆ . ಇನ್ನೂ ಹೇಮಂತ್ ಕುಮಾರ್, ವ್ಯಾಸ ರಾಜ್, ಅನುರಾಧಾ ಭಟ್, ಅಪೂರ್ವ ಶ್ರೀಕುಮರ್ ಅವರು ಧ್ವನಿಯಾಗಿದ್ದಾರೆ ಮತ್ತು ” ಗಡಿಯಾರದ ” ಹಾಡುಗಳು ಖ್ಯಾತ ಸಂಸ್ಥೆ “ಆಕಾಶ್ ಆಡಿಯೋ” ಗೆ ಆಡಿಯೋ ಹಕ್ಕುಗಳು ಮಾರಾಟವಾಗಿದೆ.
ಫೈಟ್ ಮಾಸ್ಟರ್ ” ಥ್ರಿಲ್ಲರ್ ಮಂಜು ” ಅವರ ಸಾಹಸ, ಶ್ಯಾಮ್ ಸಿಂಧನೂರು ಅವರ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನೂ ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಈ ಚಿತ್ರದಲ್ಲಿ ರಾಜಮನೆತನಗಳ ಇತಿಹಾಸ ನೆನಪಿಸುವ ವಿಷಯದ ಜೊತೆಗೆ , ಲವ್ ಸ್ಟೋರಿ, ಕಾಮಿಡಿ, ಹಾರರ್, ಸಸ್ಪೆನ್ಸ್ , ಥ್ರಿಲ್ಲರ್ , ಆಕ್ಷನ್ ಎಲ್ಲವೂ ಇರಲಿದ್ದು, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ನೀಡುವುದರಲ್ಲಿ ಡೌಟೇ ಇಲ್ಲ. ಇನ್ನೂ ಶೀಘ್ರವೇ ಚಿತ್ರ ಬೆಳ್ಳಿ ತೆರೆಗಪ್ಪಳಿಸಲಿದ್ದು, ಚಿತ್ರದ ರಿಲೀಸ್ ಗೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.