ನಸೆಯೇರಿಸೋ ‘ಮತ್ತು’ ಹುಬ್ಬಳ್ಳಿಯಲ್ಲೂ ಸಿಕ್ತು: ಕಾರ್ಯಾಚರಣೆ ಹೇಗಿತ್ತು ಗೊತ್ತಾ..!

ಹುಬ್ಬಳ್ಳಿ: ರಾಜ್ಯದಲ್ಲಿ ಡ್ರಗ್ಸ್ ನಸೆಯ ಚರ್ಚೆಗಳು ನಡೆಯುತ್ತಿದ್ದಾಗಲೇ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಸದ್ದಿಲ್ಲದೇ ಪ್ರಕರಣವೊಂದನ್ನ ಪತ್ತೆ ಹಚ್ಚಿ ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಮಾರುತಿ ಹರಣಶಿಕಾರಿ ಮತ್ತು ಚಂದಪ್ಪ ಹರಣಶಿಕಾರಿ ಎಂಬಿಬ್ಬರನ್ನ ಬಂಧಿಸಿರುವ ಪೊಲೀಸರು 5 ಕೆಜಿ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.
ವಾಣಿಜ್ಯನಗರಿಯಲ್ಲಿ ನಡೆಯುತ್ತಿರುವ ನಿರಂತರ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾಲ ಬೀಸಿದ್ದ ಉಪನಗರ ಠಾಣೆಗೆ ಪೊಲೀಸರು, ಆರೋಪಿಗಳ ಬಗ್ಗೆ ಮಾಹಿತಿಯನ್ನ ಸಂಗ್ರಹಿಸಿದ್ದರು. ಯಾವ ಯಾವ ಭಾಗದಿಂದ ನಗರಕ್ಕೆ ಬರುತ್ತಾರೆ, ಅವರು ಯಾರಿಗೆ ಮಾರಾಟ ಮಾಡುತ್ತಾರೆ, ಸ್ಥಳೀಯರು ಯಾರು ಖರೀದಿ ಮಾಡುತ್ತಾರೆಂಬ ಮಾಹಿತಿಯನ್ನ ಸಂಗ್ರಹಿಸುತ್ತಿದ್ದಾಗಲೇ, ಗದಗ ಕಡೆಯಿಂದ ಗಾಂಜಾ ಬರುತ್ತಿರುವುದು ಗೊತ್ತಾಗಿದೆ.
ಉಪನಗರ ಠಾಣೆ ಇನ್ಸ್ ಪೆಕ್ಟರ್ ಹೊಳೆಣ್ಣನವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಉಮೇಶ ಹೆದ್ದೇರಿ, ಮಲ್ಲಿಕಾರ್ಜುನ ಧನಿಗೊಂಡ, ಸುನೀಲ ಪಾಂಡೆ, ಮಂಜು ಎಕ್ಕಡಿ, ರವಿ ಹೊಸಮನಿ, ರೇಣಪ್ಪ ಚಿಕ್ಕಲಿಗ್ಯಾರ, ಬಸವರಾಜ ಸುಣಗಾರ, ಕರಬಸಪ್ಪ ನೆಲಗುಡ್ಡ ಕಾರ್ಯಾಚರಣೆ ನಡೆಸಿದ್ದಾರೆ.
ಉಪನಗರ ಠಾಣೆಯ ಪೊಲೀಸರ ಈ ಕಾರ್ಯದಿಂದ ನಗರದಲ್ಲಿ ನಡೆಯುತ್ತಿದ್ದ ಗಾಂಜಾ ದಂಧೆಯ ಮೂಲ ಸಿಗುವ ಸಾಧ್ಯತೆಯಿದ್ದು, ಪ್ರಮುಖ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆನ್ನಲಾಗಿದೆ. ಆದಷ್ಟು ಬೇಗನೇ ಪ್ರಮುಖನ ಬಂಧನವಾದರೇ, ಹುಬ್ಬಳ್ಳಿಯ ಜನ ಮತ್ತಷ್ಟು ನೆಮ್ಮದಿಯ ನಿಟ್ಟುಸಿರು ಬಿಡಬಹುದು.