ಬಂಡಾಯದ ನೆಲದ ಹೋರಾಟಗಾರನಿಗೆ ಹೃದಯಾಘಾತ: ಕಳಚಿದ ರೈತರ ಕೊಂಡಿ
1 min readನವಲಗುಂದ: ಕಳಸಾ-ಬಂಡೂರಿ ನಾಲೆಯನ್ನ ಮಲಪ್ರಭೆಗೆ ಜೋಡಿಸಬೇಕೆಂದು ನಡೆಯುತ್ತಿದ್ದ ಹೋರಾಟದಲ್ಲಿ ನಿರಂತರವಾಗಿ ಭಾಗವಹಿಸಿ ಅನೇಕರಿಗೆ ಸ್ಪೂರ್ತಿಯಾಗಿದ್ದ ರೈತ ಸಂಘದ ಅಧ್ಯಕ್ಷ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ನವಲಗುಂದ ತಾಲ್ಲೂಕಿನ ಚಿಲಕವಾಡ ಗ್ರಾಮದ ಬಸಪ್ಪ ಪಕ್ಕೀರಪ್ಪ ಬೀರಣ್ಣವರ ಬೆಳಗಿನ ಜಾವ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ನೀರಿಗಾಗಿ ನಡೆಯುತ್ತಿದ್ದ ಹೋರಾಟದ ಮುಂಚೂಣಿಯಲ್ಲಿ ನಿಂತು ಸರಕಾರದ ವಿರುದ್ಧ ಮಾತನಾಡುತ್ತಿದ್ದ ಬಸಪ್ಪ ಬೀರಣ್ಣನವರ ನಿಧನ, ಈ ಭಾಗದ ಹಲವರಿಗೆ ಅತೀವ ದುಃಖವನ್ನುಂಟು ಮಾಡಿದೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ _12-00 ಗಂಟೆಗೆ ನವಲಗುಂದ ಹಿರೇಮಠದ ರುದ್ರಭೂಮಿಯಲ್ಲಿ ನಡೆಸಲಾಗುತ್ತಿದೆ.
ಸಂತಾಪ: ಶ್ರೀ ಹಿರೇಮಠ ಸಿದ್ದೇಶ್ವರ ಸ್ವಾಮಿಜಿ ಶ್ರೀ ಗವಿಮಠ ಬಸವಲಿಂಗ ಸ್ವಾಮಿಜಿ, ಶ್ರೀ ನಾಗಲಿಂಗ ಮಠದ ವೀರಯ್ಯ ಸ್ವಾಮಿಜಿ ಬಸವಲಿಂಗಯ್ಯ ಚಿಕ್ಕಹಂದಿಗೋಳ, ಶಾಸಕ ಶಂಕರ ಪಾಟೀಲಮುನೇನಕೋಪ್ಪ, ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ, ಚಂದ್ರುಗೌಡ್ರ ಪಾಟೀಲ, ಅಣ್ಣಪ್ಪ ಬಾಗಿ, ಲೋಕನಾಥ್ ಹೆಬಸೂರ, ಸಂಗಪ್ಪ ಹುಬ್ಬಳ್ಳಿ, ಯಲ್ಲಪ್ಪ ಸಾರವಾಡ, ಪರಮೇಶ್ವರ ಬಿಳಗಿ, ದ್ಯಾಮಣ್ಣಾ ಮಾಬನೂರ, ಬಸ್ಸುರಾಜ ಕೊಟಿಗಿ, ಗಂಗಾದರ ಮಟಿಗಾರ, ಶಿವಣಪ್ಪ ಬೀರಣ್ಣವರ, ಶಿವಪ್ಪ ಬಾಗಲಕೋಟೆ, ಬಸ್ಸು ಬಾಗಲಕೋಟೆ, ಯಲ್ಲಪ್ಪ ದೊಟಿಕಲ್ಲ ಸೇರಿದಂತೆ ಹಲವರು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.