ಹುಬ್ಳಿ-ಧಾರವಾಡದಲ್ಲಿ ಫೀಲ್ಡಿಗಿಳಿದ್ದಾರೆ ಸಾರಿಗೆ, ಅರಣ್ಯ, ಅಬಕಾರಿ ಇಲಾಖೆಯ ನೌಕರರು…!

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನ ತೆಗೆದುಕೊಳ್ಳುತ್ತಿದ್ದು, ಅದಕ್ಕೆ ಸಾಥ್ ಕೊಡಲು ಮೂರು ಇಲಾಖೆಯ ಸಿಬ್ಬಂದಿಗಳು ಅವಳಿನಗರದಲ್ಲಿ ಕಾರ್ನೋನ್ಮುಖರಾಗಿದ್ದಾರೆ.

ಹೌದು.. ಅರಣ್ಯ ಇಲಾಖೆಯ ಆರ್ ಎಫ್ ಓ ಗಳು ಸೇರಿದಂತೆ ಬಹುತೇಕ ಅಧಿಕಾರಿಗಳು ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಹಾಗೇ, ಸಾರಿಗೆ ಇಲಾಖೆಯ ಚಾಲಕ, ನಿರ್ವಾಹಕರು ಕೂಡಾ ವಾಹನಗಳನ್ನ ನಿಲ್ಲಿಸಿ, ‘ಎಲ್ಲಿಗೆ ಹೋಗುತ್ತಿದ್ರೀ, ಯಾಕೆ ಬಂದ್ರಿ’ ಎಂದು ಕೇಳುತ್ತಿದ್ದಾರೆ.
ಅವಳಿನಗರದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಮುಂದುವರೆದ ಕಾರಣದಿಂದ ನಿರಂತರವಾಗಿ ಪೊಲೀಸರು ಕರ್ತವ್ಯದಲ್ಲಿ ತೊಡಗಿದ್ದಾರೆ. ಹಾಗಾಗಿಯೇ, ಒತ್ತಡವನ್ನ ಕಡಿಮೆ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಪ್ರಮುಖ ಸ್ಥಳದಲ್ಲಿ ಇಂದು ಬೆಳಿಗ್ಗೆ ಆರು ಗಂಟೆಯಿಂದಲೇ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಮೂರು ಇಲಾಖೆಯ ಸಿಬ್ಬಂದಿಗಳನ್ನ ಆಯಾ ಠಾಣೆಗಳಿಗೆ ಹಂಚಿಕೆ ಮಾಡಲಾಗಿದೆ.