Posts Slider

Karnataka Voice

Latest Kannada News

ಹಾರೋಬೆಳವಡಿ,ಕಬ್ಬೇನೂರ ಬಳಿ ಚಿರತೆ: ಶುರುವಾಗಿದೆ ಪಿಡಿಓ-ಅರಣ್ಯಾಧಿಕಾರಿಗಳ ಹುಡುಕಾಟ..

1 min read
Spread the love

ಧಾರವಾಡ: ತಾಲೂಕಿನ ಹಾರೋಬೆಳವಡಿ ಹಾಗೂ ಕಬ್ಬೇನೂರ ಗ್ರಾಮದ ಸಮೀಪದಲ್ಲಿ ಚಿರತೆಯ ಹೆ ಜ್ಜೆ ಗುರುತುಗಳು ಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಪಿಡಿಓ ಸಮೇತ ಇನ್ನುಳಿದ ಸಿಬ್ಬಂದಿ ಹುಡುಕಾಟ ಆರಂಭಿಸಿದೆ.

ಕಳೆದ ನಾಲ್ಕೈದು ದಿನಗಳಿಂದ ಹುಬ್ಬಳ್ಳಿ-ಕವಲಗೇರಿಯಲ್ಲಿ ಕಂಡು ಬಂದಿದ್ದ ಚಿರತೆಯೇ ಈ ಭಾಗದಲ್ಲಿಯೂ ಸಂಚಾರ ನಡೆಸಿದೇಯಾ ಎಂಬ ಅನುಮಾನಗಳು ಮೂಡಿದ್ದು, ಅಧಿಕಾರಿಗಳು ತಲೆ ಚಚ್ಚಿಕೊಳ್ಳುವಂತಾಗಿದೆ.

ಹಾರೋಬೆಳವಡಿ ಗ್ರಾಮ ಪಂಚಾಯತಿ ಪಿಡಿಓ ಮನಿಯಾರ ಸೇರಿದಂತೆ ಅರಣ್ಯಾಧಿಕಾರಿಗಳು ಗ್ರಾಮಗಳ ಹೊರವಲಯದಲ್ಲಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದು, ಈ ಭಾಗದ ಜನರಲ್ಲೂ ಆತಂಕ ಮನೆ ಮಾಡಿದೆ.

ಚಿರತೆಯ ಹೆಜ್ಜೆ ಗುರುತುಗಳು ಮೂಡಿದ್ದು, ಈ ಬಗ್ಗೆ ಹಲವು ರೀತಿಯಲ್ಲಿ ಕಾರ್ಯಾಚರಣೆ ಮಾಡಲು ಅನುವಾಗುತ್ತಿದ್ದಾರೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಚಿರತೆ ಮಾತ್ರ, ಹೀಗೆ ಕಂಡು ಹಾಗೇ ಮಾಯವಾಗುತ್ತಿರುವುದು ಸೋಜಿಗ ಮೂಡಿಸುತ್ತಿದೆ.


Spread the love

Leave a Reply

Your email address will not be published. Required fields are marked *