Posts Slider

Karnataka Voice

Latest Kannada News

ಕಲಘಟಗಿಯ ತಂಬೂರಲ್ಲಿ ಆನೆಗಳ ದಾಳಿ: “ಎಂಟಾನೆಗಳಿಗೆ” ಬೆದರಿದ ‘ಎಂಟಾಧಿಕಾರಿಗಳು’…!

Spread the love

ಕಲಘಟಗಿ: ತಾಲ್ಲೂಕಿನ ತಂಬೂರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆ ವೇಳೆ ಆನೆಗಳು ದೀಢಿರನೆ ದಾಳಿ ಮಾಡಿದ್ದು, ಹಲವರಿಗೆ ಗಾಯಗಳಾಗಿವೆ.

ಹಲವಾರು ದಿನಗಳಿಂದ 8 ಆನೆಗಳು  ಹಿಂಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ  ಆಲದಕಟ್ಟಿ, ತಂಬೂರ, ಸಂಗಮೇಶ್ವರ ಡಿಂಬವಳ್ಳಿ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ  ಬೀಡುಬಿಟ್ಟಿದ್ದವು. ಅರಣ್ಯ ಅಧಿಕಾರಿಗಳು ಆನೆಗಳನ್ನ ಕಾಡಿಗಟ್ಟಲ್ಲೂ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಅಧಿಕಾರಿಗಳ ಮೇಲೆ ದಾಳಿ ನಡೆಸಿವೆ.

ಬಮ್ಮಿಗಟ್ಟಿ ವಲಯದ ಅಧಿಕಾರಿ ಉಮ್ಮೆಶ ಕಡಿ, ಮೌನೇಶ ಲಿಂಗನಶೆಟ್ಟಿಕೊಪ್ಪ, ಸುರೇಶ ಅರವಳ್ಳಿ, ಪರಶುರಾಮ, ಕೃಷ್ಣ ಪಮ್ಮಾರ  ಸೇರಿದಂತೆ ಹಲವರಿಗೆ ಆನೆಗಳು ದಾಳಿ ಮಾಡಿದ್ದರಿಂದ ಹೆಚ್ಚಿನ ಗಾಯ ಸಂಭವಿಸಿದೆ. ಇನ್ನುಳಿದ ಸಿಬ್ಬಂದಿಗಳಿಗೂ ಸಣ್ಣ ಪುಟ್ಟ ಗಾಯ ಸಂಭವಿಸಿದ್ದು ಕೂಡಲೇ ಎಲ್ಲ ಸಿಬ್ಬಂದಿಗಳನ್ನ ಸ್ಥಳೀಯ ಸರಕಾರಿ ತಾಲ್ಲೂಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *