ವಿನಯ ಕುಲಕರ್ಣಿ ಅಭಿಮಾನಿ ಬಳಗದಿಂದ ಆಸ್ಪತ್ರೆಯಲ್ಲಿ ‘ಊಟದ ವ್ಯವಸ್ಥೆ’…!

ಧಾರವಾಡ: ಕೊರೋನಾ ಸಮಯದಲ್ಲಿ ಸಿವಿಲ್ ಆಸ್ಪತ್ರೆಯಲ್ಲಿ ಊಟಕ್ಕಾಗಿ ತೊಂದರೆ ಅನುಭವಿಸುತ್ತಿರುವವರಿಗೆ ಮಾಜಿ ಸಚಿವ ವಿನಯ ಕುಲಕರ್ಣಿ ಬಳಗ ಮತ್ತು ಹಿದಾಯತ್ ರಾಯಚೂರು ಅಭಿಮಾನಿ ಬಳಗ ಆಹಾರವನ್ನ ವಿತರಣೆಯನ್ನ ಮಾಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಿನ ಅಟೆಂಡೆರ್ಸ್ (ಪೋಷಕರಿಗೆ) ಲಾಕ್ ಡೌನ್ ಹಿನ್ನೆಲೆಯಲ್ಲಿ ಊಟಕ್ಕೆ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ನೂರಾರು ಜನರಿಗೆ ಊಟ ಹಾಗೂ ಮಾಸ್ಕ್ ವಿತರಿಸಲಾಯಿತು.
ಈ ಸಮಯದಲ್ಲಿ ವಿನಯ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ್ ಕೇಕರೆ, ಅಭಿಮಾನಿ ಬಳಗ ಅಧ್ಯಕ್ಷ ಬಸವರಾಜ ಜಾಧವ, ಹೀದಾಯತ ರಾಯಚೂರ, ಸಂತೋಷ ನೀರಲಕಟ್ಟಿ, ಚಾಂದಸಾಬ ಮುಲ್ಲಾ, ಖಲಂದರ್ ಜಾಗೀರದಾರ, ಖಲೀಲ್ ಶೇಖ, ಪ್ರತೀಕ್ ತೋಟದವರ, ಅರುಣ್ ಸುಂಕದ ಸೇರಿದಂತೆ ಹಲವರು ಉಪಸ್ಥಿತರಿದ್ದರು.