Posts Slider

Karnataka Voice

Latest Kannada News

Spread the love

ಧಾರವಾಡ: ಗಾಂಧಿನಗರದ ಕ್ರಾಸ್ ನಲ್ಲಿ ಬೊಂಬೆಗಳನ್ನ ಮಾರಾಟ ಮಾಡುವ ಅಂಗಡಿಗಳ ಬಳಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿ ನಂದಿಸಲು ಸ್ಥಳೀಯರು ಹೆಣಗಾಡುತ್ತಿರುವ ಘಟನೆ ನಡೆದಿದೆ.

ಉತ್ತರಪ್ರದೇಶದಿಂದ ಬಂದಿರುವ ಐದಕ್ಕೂ ಹೆಚ್ಚು ಕುಟುಂಬಗಳು ಹಲವು ದಿನಗಳಿಂದ ಇಲ್ಲಿ ಬೊಂಬೆಗಳನ್ನ ಮಾರಾಟ ಮಾಡುತ್ತಿದ್ದು, ಅವರಿರುವ ಜಾಗದ ಮೇಲೆ ವಿದ್ಯುತ್ ಕಂಬವಿದ್ದು, ಅಲ್ಲಿಂದಲೇ ಆಕಸ್ಮಿಕವಾಗಿ ಬೆಂಕಿ ತಗುಲಿ, ಅದೇ ಕಿಡಿಯಿಂದ ಅಂಗಡಿಗಳಿಗೂ ತಾಗಿದೆ.

ರಾತ್ರಿಯಾಗಿದ್ದರಿಂದ ಗಾಬರಿಯಾಗಿರುವ ಅಂಗಡಿ ಮಾಲೀಕರು, ತಮ್ಮ ಮಾರಾಟದ ವಸ್ತುಗಳನ್ನ ಉಳಿಸಿಕೊಳ್ಳುವುದಕ್ಕೆ ಪರದಾಟ ನಡೆಸುತ್ತಿದ್ದಾರೆ. ಕೆಲವರು ನೀರನ್ನ ತಂದು ಹಾಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಗಾಂಧಿನಗರದ ಪ್ರಮುಖ ಸ್ಥಳದಲ್ಲಿಯೇ ಬೆಂಕಿ ತಾಗಿದ್ದರಿಂದ ಪ್ರದೇಶದಲ್ಲಿ ಹೆಚ್ಚು ಹೊಗೆಯಾಡುತ್ತಿದೆ.


Spread the love

Leave a Reply

Your email address will not be published. Required fields are marked *