Posts Slider

Karnataka Voice

Latest Kannada News

‘FIR’ ಮಾರ್ಚಲ್ಲಿ ‘ARREST’ ಸೆಪ್ಟಂಬರಲ್ಲಿ: ಸೊಗಲದ ಕೇಸಿನ ಮರ್ಮವೇನು..

1 min read
Spread the love

ಧಾರವಾಡ: ಉಪನಗರ ಠಾಣೆಯ ಪೊಲೀಸರಿಂದ ಕಳೆದ ಮೂರು ದಿನಗಳ ಹಿಂದೆ ಜೀವ ಬೆದರಿಕೆ, ವಂಚನೆ ಮತ್ತು ಅತಿಕ್ರಮ ಪ್ರವೇಶ ಮಾಡಿದ ಪ್ರಕರಣದಲ್ಲಿ ಮಕ್ತುಂ ಸೊಗಲದ ಬಂಧನವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಆದರೆ ಯಾರಿಗೂ ಗೊತ್ತಿಲ್ಲದ ವಿಚಾರವನ್ನ ನೀವೂ ತಿಳಿದುಕೊಳ್ಳಿ. ಇಲ್ಲಿದೆ ಮಾಹಿತಿ..

ಮಕ್ತುಂ ಸೊಗಲದ ಮೇಲೆ ಮಾರ್ಚ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಹೌದು.. ಪೊಲೀಸರೇ ನೀಡಿದ ಪ್ರಕಟಣೆಯಲ್ಲಿ ಅವರೇ ಹೇಳಿದ್ದಾರೆ. ಆದರೆ, ಆತನನ್ನ ಅರೆಸ್ಟ್ ಮಾಡಿದ್ದು ಮಾತ್ರ ಮೂರು ದಿನದ ಹಿಂದೆ. ಹೀಗೇಕೆ, ಪೊಲೀಸರು ಇಷ್ಟೊಂದು ಸಮಯ ತೆಗೆದುಕೊಂಡು ಅರೆಸ್ಟ್ ಮಾಡಿದ್ದು ಏಕೆ, ಬರೋಬ್ಬರಿ ಆರು ತಿಂಗಳಿಂದ ಆತ ಧಾರವಾಡವನ್ನೇ ತೊರೆದಿದ್ದನಾ ಎಂಬ ಪ್ರಶ್ನೆ ಬಹುತೇಕರನ್ನ ಕಾಡುತ್ತಿದೆ.

ಪ್ರಕರಣ ದಾಖಲಾದ ತಕ್ಷಣವೇ ಕ್ರಮ ಕೈಗೊಂಡರೇ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂಬುದು ಪ್ರಜ್ಞಾವಂತರ ಭಾವನೆಯಾಗಿದೆ. ಇದನ್ನ ಪೊಲೀಸರು ತಿಳಿದುಕೊಳ್ಳಬೇಕಿದೆ ಎನ್ನುವುದು ನಾಗರಿಕರ ಅಭಿಪ್ರಾಯ.

ಪ್ರಕಟಣೆಯ ಯಥಾವತ್ತ್ ಇಲ್ಲಿದೆ ನೋಡಿ

ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ

ಪತ್ರಿಕಾ ಪ್ರಕಟಣೆ.

ಧಾರವಾಡ ಉಪನಗರ ಪೊಲೀಸ ಠಾಣೆ

ದಿನಾಂಕಃ 10-09-2020

ವಂಚನೆ ಮಾಡಿ, ಆಸ್ತಿಯಲ್ಲಿ ಅತೀಕ್ರಮ ಪ್ರವೇಶಿಸಿ, ಜೀವ ಬೆದರಿಕೆ ಹಾಕಿದ ಆರೋಪಿತನಿಗೆ ದಸ್ತಗೀರ ಮಾಡಿ ಕಾನೂನ ಕ್ರಮ ಜರುಗಿಸಿದ ಬಗ್ಗೆ.

——————————————————-

ದಿನಾಂಕ. 21.03.2016 ರಿಂದ ದಿನಾಂಕ: 11.03.2020 ರ ಅವಧಿಯಲ್ಲಿ ದೂರುದಾರರ ಶ್ರೀ ಅಜ್ಜಪ್ಪ ತಂದೆ ಗುರುಬಸಪ್ಪ ಗೆಂಗಣ್ಣವರ @ ಗೆಂಗಾಣಿ ಹಾಗೂ ಸಾಕ್ಷಿದಾರರಾದ ಶ್ರೀ ಭೀಮಪ್ಪ ತಂದೆ ಗುರುಬಸಪ್ಪ ಗೆಂಗಾಣಿ @ ಗೆಂಗಣ್ಣವರ ಹಾಗೂ ಶ್ರೀ ಶಿವಲಿಂಗಪ್ಪ ತಂದೆ ಗುರುಬಸಪ್ಪ ಗೆಂಗಾಣಿ @ ಗೆಂಗಣ್ಣವರ ಸಾಃ ಎಲ್ಲರೂ ಧಾರವಾಡ ಗುಲಗಂಜಿಕೊಪ್ಪ ಮಾರುತಿ ಗುಡಿ ಇವರಿಗೆ ಸಂಬಂಧಿಸಿದ ಮಾಳಾಪೂರ ವಿ ಗ್ರಾಮದ 05 ಎಕರೆ 01 ಗುಂಟೆ ಶೇತಕಿ ಜಮೀನಿನಲ್ಲಿ ಆರೋಪಿತನಾದ ಮಕ್ತುಮಹುಸೇನ ದಿಲಾವರಸಾಬ ಸೊಗಲದ ಹಾಗೂ ಸಲೀಂ ಶೇಖಸನದಿ ಕೂಡಿ ಅಕ್ರಮ ಪ್ರವೇಶ ಮಾಡಿ, ಶೆಡ್ ನಿರ್ಮಾಣ ಮಾಡಿ, ಕಬ್ಜಾ ಪಡೆದುಕೊಂಡು ದೂರುದಾರರ ಹಾಗೂ ಅವರ ಸಹೋದರರ ಆಸ್ತಿಯನ್ನೂ ಖರೀದಿ ಮಾಡಿಕೊಳ್ಳದೆ, ಹಣವನ್ನೂ ಬೆದರಿಕೆ ಹಾಕಿದ್ದರಿಂದ ಈ ಬಗ್ಗೆ ಶ್ರೀ ಅಜ್ಜಪ್ಪ ತಂದೆ ಗುರುಬಸಪ್ಪ ಗೆಂಗಣ್ಣವರ @ ಗೆಂಗಾಣಿ ಇವರು ನೀಡಿದ ದೂರಿನ ಮೇರೆಗೆ ಧಾರವಾಡ ಉಪನಗರ ಠಾಣೆಯಲ್ಲಿ ಗುನ್ನಾ ನಂ. 44/2020 447, 420, 504, 506, ಸಹಕಲಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿತನಾದ ಮಕ್ತುಮಹುಸೇನ ದಿಲಾವರಸಾಬ ಸೊಗಲದ ಸಾಃ ಜುಮ್ಮಾ ಮಸೀದಿ ಹತ್ತಿರ ಪೆಂಡಾರಗಲ್ಲಿ ಧಾರವಾಡ ಈತನಿಗೆ ದಸ್ತಗೀರ ಮಾಡಿ ಕಾನೂನ ಕ್ರಮ ಜರುಗಿಸಿದ್ದು ಇರುತ್ತದೆ.

ಸದರ ಪ್ರಕರಣವನ್ನು ಶ್ರೀ ಆರ್. ದಿಲೀಪ್. ಐಪಿಎಸ್. ಪೊಲೀಸ್ ಆಯುಕ್ತರು, ಶ್ರೀ ಕೃಷ್ಣಕಾಂತ. ಪಿ. ಐಪಿಎಸ್. ಉಪ-ಪೊಲೀಸ್ ಆಯುಕ್ತರು (ಕಾವಸು), ಶ್ರೀ ಆರ್. ಬಿ. ಬಸರಗಿ. ಉಪ-ಪೊಲೀಸ್ ಆಯುಕ್ತರು (ಅ.ವಿ), ಹುಬ್ಬಳ್ಳಿ-ಧಾರವಾಡರವರ ಹಾಗೂ ಶ್ರೀಮತಿ ಅನುಷಾ ಜಿ. ಸಹಾಯಕ ಪೊಲೀಸ್ ಆಯುಕ್ತರು ಧಾರವಾಡ ಶಹರ ಉಪ-ವಿಭಾಗ, ಶ್ರೀ ಪ್ರಮೋದ ಸಿ ಯಲಿಗಾರ ಪೊಲೀಸ್ ಇನ್ಸಪೆಕ್ಟರ್ ಉಪನಗರ ಪೊಲೀಸ್ ಠಾಣೆ ಇವರ ಮಾರ್ಗದರ್ಶನದಲ್ಲಿ ಶ್ರೀ ಎಸ್ ಎಮ್ ಹುಣಶೀಕಟ್ಟಿ ಪಿಎಸ್‍ಐ (ಕಾವಸು) ಉಪನಗರ ಠಾಣೆ ಧಾರವಾಡ ಇವರ ನೇತೃತ್ವದಲ್ಲಿ ಅಧಿಕಾರಿ ವ ಸಿಬ್ಬಂಧಿಗಳೊಂದಿಗೆ ಪ್ರಕರಣವನ್ನು ಭೇದಿಸಿ ಮೇಲ್ಕಂಡ ಆರೋಪಿತನಿಗೆ ದಸ್ತಗೀರ ಮಾಡಿ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.


Spread the love

Leave a Reply

Your email address will not be published. Required fields are marked *