ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಆತ್ಮಹತ್ಯೆ: ಬೆಚ್ಚಿಬಿದ್ದ ಚಂದನವನ
ಚಿತ್ರದುರ್ಗ: ಕನ್ನಡ ಸಿನೇಮಾ ರಂಗದ ಮತ್ತೋಬ್ಬ ಯುವ ನಿರ್ದೇಶಕ ಆತ್ಮಹತ್ಯೆಗೆ ಶರಣಾದ ಘಟನೆ ಹೊಳಲ್ಕೆರೆಯಲ್ಲಿ ಸಂಭವಿಸಿದ್ದು, ಸಿನೇಮಾದವರ ಸಾವಿನ ಸರಣಿ ಮುಂದುವರೆದಿದೆ.
ಹೇಮಂತ ನಾಯ್ಕ ಎಂಬ ದಾರಿದೀಪ, ಧರ್ಮಪುರ ಸಿನೇಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಚಿತ್ರರಂಗದಲ್ಲಿ ಹೊಸ ಭರವಸೆಯನ್ನ ಮೂಡಿಸಿದ್ದ.
ಇತ್ತೀಚೆಗೆ ತನ್ನ ಪತ್ನಿ ಆಶಾ ಹಾಗೂ ಮಗಳನ್ನ ಕಳೆದುಕೊಂಡಿದ್ದ ಹೇಮಂತ ವಿರುದ್ಧ, ಆಶಾಳ ಪಾಲಕರು ದೂರು ನೀಡಿದ್ದರಿಂದ ಕೆಲವು ದಿನಗಳ ವರೆಗೆ ಜೈಲುವಾಸ ಅನುಭವಿಸಿದ್ದಾರೆ.
ಈ ಎಲ್ಲ ಘಟನೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ.