Posts Slider

Karnataka Voice

Latest Kannada News

ಮಗಳಿಗಾಗಿ “ಅವನಿಗೆ ಇರಿದು” ಜೈಲು ಪಾಲಾದ ನತದೃಷ್ಟ ಅಪ್ಪ…

Spread the love

ಧಾರವಾಡ: ತನ್ನ ಮಗಳೊಂದಿಗೆ ಸಲುಗೆ ಬೆಳೆಸಿದ್ದಾನೆ ಎಂದುಕೊಂಡು ಹುಡುಗನಿಗೆ ಚಾಕು ಇರಿದಿದ್ದ ತಂದೆಯೋರ್ವ ಜೈಲುಪಾಲಾಗಿರುವ ಬಗ್ಗೆ ಪೊಲೀಸ್ ಕಮೀಷನರ್ ಸಂತೋಷ ಬಾಬು ದೃಢಪಡಿಸಿದ್ದಾರೆ.

ಶಶಾಂಕ್ ಎಂಬ ಯುವಕನಿಗೆ ಶ್ರೀಕಾಂತ್ ಬಡಿಗೇರ ಎಂಬುವವರು ಕುಡಿತ ಮತ್ತಿನಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ, ಅವರನ್ನ ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ ಎಂದು ಕಮೀಷನರ್ ಹೇಳಿದರು.

ಪ್ರೀತಿಯಿಂದ ಸಲುಹಿದ ಮಗಳು ಎಲ್ಲಿ ಕೈಬಿಟ್ಟು ಹೋಗುತ್ತಾಳೊ ಎಂಬ ಆತಂಕದಿಂದ ಹುಡುಗನಿಗೆ ಚಾಕು ಇರಿದು ಶ್ರೀಕಾಂತ್ ಜೈಲು ಪಾಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಶಶಾಂಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


Spread the love

Leave a Reply

Your email address will not be published. Required fields are marked *