ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಫಾದರ್ ಜೇಕಬ್ ಇನ್ನಿಲ್ಲ…!

ಧಾರವಾಡ: ಜಿಲ್ಲೆಯ ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಫಾದರ್ ಜೇಕಬ್ ಅವರು ಇಂದು ನಿಧನರಾಗಿದ್ದಾರೆ.
ತುಮರಿಕೊಪ್ಪ ಹೈಸ್ಕೂಲಿನ ಸಂಸ್ಥಾಪಕರು, ಕಲಘಟಗಿ ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿ ಮೂಡಿಸಿದ ಹರಿಕಾರ, ಬಡವರ ಬಂದು, ಜನಸಾಮಾನ್ಯರ ಪಾಲಿನ ಕುಬೇರ ಎಂದೇ ಕರೆಯಲ್ಪಡುತ್ತಿದ್ದ ಫಾದರ್ ಜೇಕಬ್ ಇನ್ನಿಲ್ಲವಾಗಿದ್ದಾರೆ.
ಕಲಘಟಗಿ ತಾಲೂಕಾ ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಜೇಕಬ್ ಅವರು, ತಮ್ಮ ಸಂಸ್ಥೆಯಿಂದ ರಸ್ತೆ, ಮನೆಗಳನ್ನು ನಿರ್ಮಿಸಿ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸಿದ್ದರು. ಬೆಣಚಿಕೆರೆ ನಿರ್ಮಿಸಿ ಪಟ್ಟಣಕ್ಕೆ ಕುಡಿಯುವ ನೀರು ದೊರಕುವಂತೆ ಮಾಡಿದ್ದರು.
ತಮ್ಮ 90 ನೇ ವಯಸ್ಸಿನಲ್ಲಿ ಇಂದು ವಿಧಿವಶರಾದಗಿದ್ದಾರೆ. 1983 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ, ಜೇಕಬ್ ಅವರು, ಕಲಘಟಗಿ ಕ್ಷೇತ್ರದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು.
ಸಂತೋಷ ಲಾಡ ಸಂತಾಪ: ಕ್ಷೇತ್ರದ ಮಾಜಿ ಶಾಸಕ ಪಾಧರ್ ಜೇಕಬ್ ಅವರ ನಿಧನಕ್ಕೆ ಮಾಜಿ ಸಚಿವ ಸಂತೋಷ ಲಾಡ ಸಂತಾಪ ಸೂಚಿಸಿದ್ದಾರೆ. ಕಲಘಟಗಿ ಕ್ಷೇತ್ರದ ಬಗ್ಗೆ ಅವರಿಗಿದ್ದ ಪ್ರೀತಿ ಅನನ್ಯ. ಅವರ ಒಡನಾಡಿಗಳಿಗೆ ದುಃಖವನ್ನ ಭರಿಸುವ ಶಕ್ತಿಯನ್ನ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.