ಮೂವರು ಮಾಜಿ ಮೇಯರ್ ಗಳ ಸೋಲು- ಮೂರು ಮಾಜಿ ಮೇಯರ್ ಗಳ ಗೆಲುವು…!

ಧಾರವಾಡ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೂವರು ಮಾಜಿ ಮೇಯರ್ ಗಳು ಸೋಲನ್ನ ಅನುಭವಿಸಿದ್ದು, ಇಬ್ಬರು ಮಾಜಿ ಮೇಯರ್ ಗಳು ಗೆಲುವಿನ ನಗೆಯನ್ನ ಬೀರಿದ್ದಾರೆ.

ಭಾರತೀಯ ಜನತಾ ಪಕ್ಷದ ಡಾ.ಪಾಂಡುರಂಗ ಪಾಟೀಲ ಹಾಗೂ ಮಂಜುಳಾ ಅಕ್ಕೂರ ಜೊತೆಗೆ ಕಾಂಗ್ರೆಸ್ ನ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಸೋಲನ್ನ ಅನುಭವಿಸಿದ್ದಾರೆ.


ಮಾಜಿ ಮೇಯರ್ ಗಳಾದ ಶಿವು ಹಿರೇಮಠ ಹಾಗೂ ವೀರಣ್ಣ ಸವಡಿ, ರಾಧಾಬಾಯಿ ಸಫಾರೆ ಗೆಲವು ಸಾಧಿಸಿದ್ದು, ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಪತ್ನಿಯೂ ಕೂಡಾ ಗೆಲವು ಸಾಧಿಸಿದ್ದಾರೆ.