Posts Slider

Karnataka Voice

Latest Kannada News

Big Breaking- ಹುಬ್ಬಳ್ಳಿಯ ವೈಷ್ಣೋದೇವಿ ದೇವಿ ಮಂದಿರದ ದೇವಪ್ಪಜ್ಜ ಕುಸುಗಲ್ ಭೀಕರ ಹತ್ಯೆ…!!!!

1 min read
Spread the love

ಹುಬ್ಬಳ್ಳಿ: ಧಾರವಾಡ ರಸ್ತೆಯ ಈಶ್ವರನಗರದ ಶ್ರೀ ವೈಷ್ಣೋದೇವಿ ಮಂದಿರದ ಶ್ರೀ ದೇವಪ್ಪಜ್ಜ ಕುಸುಗಲ್ ಅವರನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಪ್ರಕರಣ ಈಗಷ್ಟೇ ನಡೆದಿದೆ.

ಮಂದಿರದ ಮುಂಭಾಗದಲ್ಲೇ ಹೊಡೆದು ಪರಾರಿಯಾಗಿರುವ ಆರೋಪಿಗಳು, ಸ್ಥಳೀಯರು ದೇವಪ್ಪಜ್ಜ ಅವರನ್ನ ಕಿಮ್ಸಗೆ ರವಾನೆ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ನವನಗರದ ಎಪಿಎಂಸಿ ಠಾಣೆಯ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.

ದೇವಪ್ಪಜ್ಜ ಕುಸುಗಲ್ ಅಜ್ಜನವರು ಇಂದು ನಡೆದ ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದಿದ್ದರೆಂದು ಗೊತ್ತಾಗಿದೆ.

ಶ್ರೀ ದೇವಪ್ಪಜ್ಜನವರ ಮನೆ ಹುಬ್ಬಳ್ಳಿಯ ವಿದ್ಯಾನಗರದ ಲೋಕಪ್ಪನಹಕ್ಕಲದ ಬಳಿಯುದೆ.


Spread the love

Leave a Reply

Your email address will not be published. Required fields are marked *