“ಅಸಲಿ-ನಕಲಿ” ತನಿಖೆಗೆ ಆದೇಶ ನೀಡಿದ ಸರಕಾರ: ಧಾರವಾಡ ಡಿಡಿಪಿಐ ಸ್ಥಿತಿ ಅಯೋಮಯ…!
1 min readಬೆಂಗಳೂರು: ಹುಬ್ಬಳ್ಳಿ ತಾಲೂಕಿನ ಮಂಟೂರ ಪ್ರೌಢಶಾಲೆಯ ಅನುದಾನ ಪಡೆಯುವಾಗ ನಕಲಿ ದಾಖಲೆಗಳು ಸೃಷ್ಠಿಯಾಗಿದ್ದರೂ, ಅನುದಾನ ಬಿಡುಗಡೆ ಮಾಡಿರುವ ಕ್ರಮದ ಬಗ್ಗೆ ಪರಿಶೀಲನೆ ನಡೆಸಲು ಪ್ರೌಢಶಾಲಾ ಮಂಡಳಿ ನಿರ್ದೇಶನ ನೀಡಿದ್ದು, ಧಾರವಾಡ ಡಿಡಿಪಿಐ ಬಣ್ಣ ಬಯಲಾಗಲಿದೆ ಎಂದು ಹೇಳಲಾಗುತ್ತಿದೆ.
ಶಾಲೆಯ ದಾಖಲಾತಿಗಳು ಸೇರಿದಂತೆ ಹಲವು ನಕಲಿ ಪ್ರಕಟಣೆ ತೋರಿಸಿ, ಅನುದಾನ ಪಡೆಯುವ ಹುನ್ನಾರದಲ್ಲಿ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ನಿರಂತರವಾಗಿ ಕೇಳಿ ಬರುತ್ತಿತ್ತು.
ಇದೇ ಕಾರಣದಿಂದ ಹೋರಾಟ ನಡೆಸುತ್ತಿದ್ದ ಗ್ರಾಮಸ್ಥರಿಗೆ ಸರಕಾರದ ಆದೇಶ ಹುಮ್ಮಸ್ಸು ನೀಡಿದ್ದು, ಮುಖವಾಡ ಬಯಲಾಗಲಿವೆ ಎಂಬ ಆಶಾಭಾವನೆ ಹೊಂದಿದ್ದಾರೆ.
ಡಿಡಿಪಿಐ ಕೆಳದಿಮಠ ಅವರು ಡೆಪ್ಟೇಟೇಷನ್ ಮಾಡಿದ್ದವರನ್ನ ಮರಳಿ ಅವರು ಸಂಬಳ ಪಡೆಯುವ ಶಾಲೆಗೆ ಹೋಗಲು ವರ್ಗಾವಣೆ ಮಾಡಿದ್ರೂ ಕೂಡಾ, ನವಲೂರ ಶಾಲೆಯ ಶಶಿಕಾಂತ ಬಸಾಪುರ ಮತ್ತು ನೇಕಾರನಗರ ಶಾಲೆಯ ದೊಡ್ಡವಾಡ ಜಾಗ ಖಾಲಿ ಮಾಡದೇ ಇರುವುದು, ಡಿಡಿಪಿಐ ಆದೇಶಗಳ ಬೆಲೆ ಎಷ್ಟಿದೆ ಎಂಬುದನ್ನ ತೋರಿಸುತ್ತಿದೆ.