ಕವಿವಿ ಕ್ಯಾಂಪಸಲ್ಲಿ ‘ಒಂಟಿ ಸಲಗ’- ಆತಂಕದಲ್ಲಿ…

ಧಾರವಾಡ: ಪಾವಟೆನಗರದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಬೆಳಿಗ್ಗೆಯಿಂದಲೂ ಒಂಟಿ ಸಲಗವೊಂದು ಬಂದಿದ್ದು, ಕ್ಯಾಂಪಸ್ ನಲ್ಲಿರುವ ಬಹುತೇಕರು ಆತಂಕಗೊಂಡಿದ್ದಾರೆ.
ವೀಡಿಯೋ..
ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸನಲ್ಲಿರುವ ಗೆಸ್ಟ್ ಹೌಸ್ ಬಳಿ ಕಾಣಿಸಿಕೊಂಡ ಆನೆಯನ್ನ ಪತ್ತೆ ಹಚ್ಚಲು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಮರಗಳಡಿ ಆನೆ ಮರೆ ಮಾಚಿದೆ.
ಒಂಟಿಸಲಗದ ಭಾವಚಿತ್ರವನ್ನ ತೆಗೆಯಲಾಗಿದ್ದು, ಇದೀಗ ಕಾಣಿಸದೇ ಇರುವುದು ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದ್ದು, ದ್ರೋಣ ಮೂಲಕ ಆನೆಯನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಸಲಗವೂ ಸಾರ್ವಜನಿಕರು ಇದ್ದಲ್ಲಿಗೆ ಬರದಂತೆ ಮುಂಜಾಗ್ರೆತಯನ್ನ ತೆಗೆದುಕೊಳ್ಳಲಾಗಿದ್ದು, ಅರಣ್ಯ ಇಲಾಖೆಯ ಹೆಚ್ಚಿನ ಸಿಬ್ಬಂದಿಯನ್ನ ಕವಿವಿ ಕ್ಯಾಂಪಸಗೆ ಕರೆಸಿಕೊಳ್ಳಲಾಗಿದೆ.