Posts Slider

Karnataka Voice

Latest Kannada News

ಬಿಈಓ ಹೆಸರಲ್ಲೇ ಹಣದ ಬೇಡಿಕೆ: ವೈರಲ್ ಆಡೀಯೋದಲ್ಲಿದೇನಿದೆ ಗೊತ್ತಾ..!

1 min read
Spread the love

ಬಳ್ಳಾರಿ: ಶಾಲಾ ತಪಾಸಣೆಗಾಗಿ ಮುಖ್ಯ ಗುರುಗಳಿಗೆ ಹಣದ ಬೇಡಿಕೆಯನ್ನ ಬಿಈಓ ಹೆಸರಲ್ಲೇ ಮಾಡಿರುವ ಆಡೀಯೋಯೊಂದು ವೈರಲ್ ಆಗಿದ್ದು, ಅಂತವರ ಮೇಲೆ ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೂವಿನಹಡಗಲಿ ತಾಲೂಕು ಘಟಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಗ್ರಹಿಸಿದೆ.

ವೈರಲ್ ಆಡೀಯೋ ಇಲ್ಲಿದೆ ನೋಡಿ…

ಸರಕಾರಿ ಶಾಲೆಯ ಮುಖ್ಯ ಗುರುಗಳ ಹುದ್ದೆಯಿಂದ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ಪಡೆದ ಶಿಕ್ಷಕರಿಂದ ಮೂಲ ಶಾಲೆಯಿಂದ ಬಿಡುಗಡೆಯಾಗಲು, ಶಾಲಾ ತಪಾಸಣೆ ನಡೆಸಬೇಕೆಂದು ಆದೇಶವಿದೆ. ಆ ಆದೇಶದ ಹಿನ್ನೆಲೆಯಲ್ಲಿ ಬಿಈಓ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಪುಷ್ಪ ಬಿ.ಎಸ್ ಅವರು ತಪಾಸಣೆ ಮಾಡಲು ಹಣದ ಬೇಡಿಕೆಯನ್ನಿಟ್ಟಿದ್ದಾರೆ.

ಲಂಬಾಣಿ ಭಾಚೆಯಲ್ಲಿರುವ ಆಡೀಯೋ ಇದೀಗ ವೈರಲ್ ಆಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಲಂಚತನಕ್ಕೆ ಮುಂದೆ ಆಗಿದ್ದಾರಾ ಎಂಬ ಸಂಶಯ ಮೂಡುವಂತಾಗಿದೆ. ಇದೇ ಕಾರಣಕ್ಕೆ ಹೂವಿನ ಹಡಗಲಿ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಮತ್ತಿತರರು ಮನವಿಯನ್ನ ನೀಡಿ, ತಕ್ಷಣವೇ ಲಂಚದ ಮಾತಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿನ ಲಂಚಗುಳಿತನ ಶಾಲಾ ತಪಾಸಣೆ ಮಾಡುವ ಸಮಯದಲ್ಲೂ ನಡೆಯುತ್ತಿದೆ ಎಂಬುದು ಈ ಮೂಲಕ ಹೊರಗೆ ಬಿದ್ದಿದ್ದು, ಶಿಕ್ಷಣ ಸಚಿವರು ಏನು ಹೇಳುತ್ತಾರೋ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *

You may have missed