ಕಾನೂನು ಬಾಹಿರ್ ಆಗಿದ್ದನ್ನ ಹಿಂಬದಿ ಬಾಗಿಲಿನಲ್ಲಿ ಮಾಡಲು ಮುಂದಾದ ಶಿಕ್ಷಣ ಇಲಾಖೆ…!

ಬೆಂಗಳೂರು: ಶಿಕ್ಷಕರ ವರ್ಗಾವಣೆ ಕುರಿತು ಕಾನೂನು ಬಾಹಿರ ಆಗಿರುವ ಚಟುವಟಿಕೆಯನ್ನ ಮಾಡಲು ರಾಜ್ಯದ ಶಿಕ್ಷಣ ಇಲಾಖೆ ಮುಂದಾಗಿದ್ದು, ಅದೇ ಕಾರಣಕ್ಕೆ ಸುಗ್ರಿವಾಜ್ಞೆ ಹೊರಡಿಸುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿರುವ ನೊಂದ ಶಿಕ್ಷಕರು ರಾಜ್ಯಪಾಲರಿಗೆ ಪತ್ರವನ್ನ ಬರೆದು ಒತ್ತಾಯಿಸಲಾಗುತ್ತಿದೆ.

ಈ ಹಿಂದೆ ಹೆಚ್ಚುವರಿಯಾಗಿದ್ದ ಕೆಲವೇ ಕೆಲವು ಶಿಕ್ಷಕರಿಗೆ ಅನುಕೂಲ ಮಾಡುವ ಉದ್ದೇಶದಿಂದಲೇ ಸುಗ್ರಿವಾಜ್ಞೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೊದಲು ಹೆಚ್ಚುವರಿಯಾದ ಶಿಕ್ಷಕರಿಗೆ ವರ್ಗಾವಣೆ ಮಾಡುವುದನ್ನ ಬೇಡ ಎನ್ನುತ್ತಿಲ್ಲ, ಆದರೆ, ಅವರಿಗೆ ಮೊದಲ ಆಧ್ಯತೆ ಕೊಡುವುದು ಸರಿಯಲ್ಲ ಎಂಬುದು ನೊಂದ ಶಿಕ್ಷಕರ ಅಂಬೋಣ.
ಕರ್ನಾಟಕ ಸರಕಾರದ ಮೊದಲು ತೆಗೆದುಕೊಂಡ ತೀರ್ಮಾನ ಕಾನೂನು ಬಾಹಿರವೆಂದು ಹೇಳಿದ ಮೇಲೂ ಹಿಂಬದಿ ಬಾಗಿಲಿನ ಮೂಲಕ ಮತ್ತೆ, ಅದೇ ಆದೇಶವನ್ನ ಮಾಡಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಶಿಕ್ಷಕರಲ್ಲಿ ಮೂಡುತ್ತಿದೆ.

ಈ ಎಲ್ಲ ಕಾರಣಗಳಿಂದ ನೂರಾರೂ ಶಿಕ್ಷಕರು ರಾಜ್ಯಪಾಲರಿಗೆ ಪತ್ರಗಳನ್ನ ಬರೆದು, ವರ್ಗಾವಣೆಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ಸುಗ್ರಿವಾಜ್ಞೆಗೆ ಅನುಮೋದನೆ ನೀಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.
2016-17ರಲ್ಲಿ ಹೆಚ್ಚುವರಿಯಾಗಿ ಬೇರೆ ಕಡೆ ಹೋದ ಶಿಕ್ಷಕರನ್ನ ಮರಳಿ ಶಹರಕ್ಕೆ ತರುವ ಷಢ್ಯಂತ್ರ ಸರಕಾರದ ಶಿಕ್ಷಣ ಇಲಾಖೆ ಮಾಡುತ್ತಿದೆ. ಇದರಿಂದ ಇನ್ನುಳಿದ ಶಿಕ್ಷಕರಿಗೆ ತೀವ್ರ ತೊಂದರೆಯಾಗುತ್ತದೆ ಎಂಬುದು ನೂರಾರೂ ಶಿಕ್ಷಕರ ನೋವಾಗಿದೆ.