ಧಾರವಾಡದಲ್ಲಿ ಸರಕಾರಿ ಶಾಲೆಯನ್ನೇ ಬಾಡಿಗೆಗೆ ಕೊಟ್ಟ ‘HM’: ಬಿಇಓ ಪದಕಿಯವರಿಗೂ ಪಾಲಿದೇಯಾ…!!??

ಧಾರವಾಡ: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಎಂದು ವಿದ್ಯಾರ್ಥಿಗಳನ್ನ ಸ್ವಾಗತಿಸುವ ಶಾಲೆಯನ್ನ ಮುಖ್ಯಾಧ್ಯಾಪಕನೋರ್ವ ಬಾಡಿಗೆ ಕೊಟ್ಟ ಪ್ರಕರಣವೊಂದು ಧಾರವಾಡದಲ್ಲಿ ಬೆಳಕಿಗೆ ಬಂದಿದ್ದು, ಇದರಲ್ಲಿ ಬಿಇಓ ಪದಕಿ ಅವರದ್ದು ಪಾಲಿದೆ ಎಂದು ಹೇಳಲಾಗುತದೆ.
ಮೊದಲು ಈ ಎಕ್ಸಕ್ಲೂಸಿವ್ ವೀಡಿಯೋ ನೋಡಿ…
ಸರಕಾರಿ ಉರ್ದು ಶಾಲೆ ನಂಬರ 1 ರ ಎಸ್.ಎ.ಪೀರಜಾದೆ ಎಂಬ ಮುಖ್ಯಾಧ್ಯಾಪಕರೇ ಜಾತ್ರೆಯ ವೇಳೆಯಲ್ಲಿ ಶಾಲೆಯ ಒಂದು ಭಾಗವನ್ನ ಬಾಡಿಗೆಗೆ ಬಿಟ್ಟಿದ್ದಾರೆ. ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿಯವರ ಪರವಾನಿಗೆ ಇದೆ ಎಂದು ಹೇಳಲಾಗುತ್ತಿದೆ.
ದಸರಾ ಸಮಯದಲ್ಲಿ ಶಾಲೆಗಳನ್ನ ರಜೆ ನೀಡಲಾಗಿದ್ದು, ಇದೇ ಸಮಯದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದನ್ನ ಬಂಡವಾಳ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇಂಥವರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮವನ್ನ ಜರುಗಿಸಬೇಕಿದೆ.