ಶಿಕ್ಷಣ ಇಲಾಖೆಯ ಎರಡು ಮಹತ್ವದ ಆದೇಶಗಳು…!

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಇಂದು ಎರಡು ಮಹತ್ವದ ಆದೇಶಗಳನ್ನ ಮಾಡಿದ್ದು, ಶಿಕ್ಷಕ ಸಮೂಹದಲ್ಲಿ ಚೂರು ನೆಮ್ಮದಿಯನ್ನ ಮೂಡಿಸಲಿವೆ.

ರಾಜ್ಯಾಧ್ಯಾಂತ ಕೋವಿಡ್-19 ದಿಂದ ಮೃತಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ನೌಕರರು ಹಾಗೂ ಶಿಕ್ಷಕರಿಗೆ ಪರಿಹಾರವನ್ನ ನೀಡುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ ಪತ್ರವನ್ನ ಬರೆದಿದ್ದಾರೆ.
ಇನ್ನೊಂದು ಸಭಾ ಸೂಚನಾ ಪತ್ರವನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸರಕಾರದ ಅಧೀನ ಕಾರ್ಯದರ್ಶಿಗಳು ಪತ್ರವೊಂದನ್ನ ಬರೆದಿದ್ದು, 2020-21ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆ ಬಗ್ಗೆ ಚರ್ಚಿಸಲು ಮೇ 24ರಂದು ಜೂಮ್ ಮೀಟಿಂಗ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ಎರಡು ಪತ್ರಗಳು ಶಿಕ್ಷಕರ ವಲಯದಲ್ಲಿ ಚೂರು ನೆಮ್ಮದಿಯನ್ನ ನೀಡಲಿವೆ. ನೆನೆಗುದಿಗೆ ಬಿದ್ದಿರುವ ವರ್ಗಾವಣೆಯ ಬಗ್ಗೆ ಬೇಗನೇ ಕ್ರಮ ತೆಗೆದುಕೊಳ್ಳುವುದು ಸೂಕ್ತವೆನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.