Karnataka Voice

Latest Kannada News

ಬೆಳ್ಳಂಬೆಳಿಗ್ಗೆ ರಸ್ತೆಯುದ್ದಕ್ಕೂ ಬಿದ್ದ ಹೆಣಗಳು- ಜೀವ ಉಳಿಸಿಕೊಳ್ಳಲು ಹೋದವರಿಗೆ ಬಿತ್ತು ಮಚ್ಚು..!

Spread the love

ಚಿತ್ರದುರ್ಗ: ಹಂದಿ ಸಾಕುತ್ತಿದ್ದ ಮನೆಯ ಮೇಲೆ ಕಳ್ಳರು ದಾಳಿ ಮಾಡಿ ಮೂವರು ಮಾಲೀಕರನ್ನೇ ಹತ್ಯೆಗೈದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಬೆಳಗಿನ ಜಾವ ನಡೆದಿದೆ.

ಹಂದಿ ಸಾಕುತ್ತಿದ್ದ ಮಾರೇಶ ಹಾಗೂ ಈತನ ಮಗ ಸೀನಪ್ಪ ಮತ್ತು ಮಾರೇಶನ ಸಹೋದರನ ಮಗ ಯಲ್ಲೇಶನ ಕೊಲೆ ಮಾಡಲಾಗಿದೆ. ನೂರಾರು ಹಂದಿಗಳನ್ನ ಸಾಕಿರುವ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಬೆಳಗಿನ ಜಾವ ಘಟನೆ ನಡೆದಿದ್ದರಿಂದ ಗಾಬರಿಗೊಂಡ ಮಾಲೀಕರು ಮೇಲೆ ಬರುತ್ತಿದ್ದಂತೆ ಅವರ ಮೇಲೆ ಖಾರದ ಪುಡಿ ಎರಚಿ ಕೊಲೆ ಮಾಡಲಾಗಿದೆ.

ಬಂದವರ ಬಗ್ಗೆ ಯಾವುದೇ ಮಾಹಿತಿಯಿಲ್ಲವಾದರೂ, ಈ ಭಾಗದಲ್ಲಿ ಕಳ್ಳತನ ಮಾಡುವ ಗುಂಪುಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ನೀಡಿರುವ ನಾಯಕನಟ್ಟಿ ಠಾಣೆಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮಾರೇಶನ ಮಗ ಹರಿತವಾದ ಆಯುಧದಿಂದ ತಪ್ಪಿಸಿಕೊಳ್ಳೋ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿಯೇ ರಸ್ತೆಯಲ್ಲೇ ಆತನನ್ನ ಕೊಚ್ಚಿ ಕೊಲೆ ಮಾಡಲಾಗಿದೆ. ಬೆಳ್ಳಂಬೆಳಿಗ್ಗೆ ನಡೆದ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹೌಹಾರಿದ್ದಾರೆ.


Spread the love

Leave a Reply

Your email address will not be published. Required fields are marked *