ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆ-ಸಿಡಿಲಿಗೆ ಬಲಿಯಾದ ಬಾಲಕ
1 min readಧಾರವಾಡ: ತಡರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರೈತರಿಗೆ ಅನುಕೂಲವಾಗಿದೆಯಾದರೂ, ಸಿಡಿಲಿನ ಹೊಡೆತಕ್ಕೆ ಬಾಲಕನೋರ್ವ ಅಸುನೀಗಿದ ಘಟನೆ ಅಮರಗೋಳದ ಸಮೀಪ ನಡೆದಿದೆ.
ತಡರಾತ್ರಿಯಿಂದಲೂ ಒಂದೇ ಸಮನೆ ಮಳೆಯಾಗಿದ್ದು, ಮುಂಗಾರು ಬೆಳೆಯುವ ತರಾತುರಿಯಲ್ಲಿದ್ದ ರೈತರಿಗೆ ಅನುಕೂಲವಾಗಿದೆ. ಈ ಸಲದ ಮುಂಗಾರು ಹದವಾಗುವ ಲಕ್ಷಣಗಳು ಕಂಡು ಬಂದಿವೆ. ರಾತ್ರಿಯ ಮಳೆಯಿಂದ ಜಮೀನನಲ್ಲಿ ಹದವಾಗಿ ಹಸಿಯಾಗಿದೆ.
ಈ ನಡುವೆ ಕುರಿ ಮೇಯಿಸಲು ಹೋದ ಬಾಲಕ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ. ಹುಬ್ಬಳ್ಳಿಯ ಅಮರಗೋಳದ ಚಿಕ್ಕೇರಿ ಪ್ಲಾಟನಲ್ಲಿ ಘಟನೆ ನಡೆದಿದ್ದು, ಮೃತ ಬಾಲಕನನ್ನ ಆಕಾಶ ಸಹದೇವಪ್ಪ ಸಾಯಣ್ಣವರ ಎಂದು ಗುರುತಿಸಲಾಗಿದೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು