Posts Slider

Karnataka Voice

Latest Kannada News

ಧಾರವಾಡದ ಹೇಮಾಮಾಲಿನಿ ಇನ್ನಿಲ್ಲ: ಖೋಯಾ ಖೋಯಾ ಚಾಂದ್…!

1 min read
Spread the love

ಧಾರವಾಡ: ದಶಕಗಳಿಂದ ಧಾರವಾಡದ ಪ್ರತಿ ಬೀದಿ ಆಳಿದ- ಅಲೆದ ಇಂದುಬಾಯಿ ವಾಜಪೇಯಿ ಅಲಿಯಾಸ್ ಧಾರವಾಡದ ಹೇಮಾಮಾಲಿನಿ ನಿನ್ನೆ ಮಧ್ಯರಾತ್ರಿ ನಿಧರಾಗಿದ್ದಾರೆ.
ಇಂದುಬಾಯಿ ವಾಜಪೇಯಿ… ಅಲಿಯಾಸ್ ಹೇಮಾಮಾಲಿನಿ. ದಶಕಗಳ ಕಾಲ ಧಾರವಾಡದ ಪ್ರತಿ ಬೀದಿ ಆಳಿದ- ಬೀದಿ ತುಂಬ ಖೋಯಾ ಖೋಯಾ ಚಾಂದ್… ದೊಡ್ಡ ಧ್ವನಿಯಲ್ಲಿ ಹಾಡಿದ, ಬಹುತೇಕರ ಬಾಲ್ಯಕ್ಕೊಂದು ಕಿಡಗೇಡಿತನ ಕಲಿಸಿದ, ನಮ್ಮ ಹುಚ್ಚು ತರಲೆ ಸಹಿಸಿದ, ಆ ಕಾಲಕ್ಕೆ ಎಂ.ಎ.ಸ್ನಾತಕೋತ್ತರ ಮುಗಿಸಿದ, ಯಾವುದೋ ಕಾಲೇಜಲ್ಲಿ ತನ್ನ ಸಹಪಾಠಿಗಳ ಜೊತೆ ಉಪನ್ಯಾಸಕಿ ಆಗಬೇಕಿದ್ದ, ಅದ್ಭುತ ಇಂಗ್ಲೀಷ್, ಹಿಂದಿ, ಮರಾಠಿ, ಕನ್ನಡ ಮಾತು- ಹಾಡುಗಳ, ಧಾರವಾಡದ ಇತಿಹಾಸದಲ್ಲಿ ತನ್ನದೊಂದು ಪಾತ್ರದ ಪುಟ ಬಿಟ್ಟು ನಡೆದ ಅನಭಿಷಕ್ತ ಸಾಮ್ರಾಜ್ಞಿ ಈ ಹೇಮಾಮಾಲಿನಿ…


Spread the love

Leave a Reply

Your email address will not be published. Required fields are marked *