ಧಾರವಾಡ ಎಪಿಎಂಸಿ ಫಲಿಸಿತು ಅಮೃತ ದೇಸಾಯಿ ವರ್ಕೌಟ್: ಸೋತು ಸುಣ್ಣವಾದ ಕಾಂಗ್ರೆಸ್
1 min readಧಾರವಾಡ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಎಪಿಎಂಸಿ ಚುನಾವಣೆಯಲ್ಲಿ ಶಾಸಕ ಅಮೃತ ದೇಸಾಯಿ ಮೋಡಿ ನಡೆದಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ.
ಧಾರವಾಡ ಜಿಲ್ಲೆಯ 71,74, 75 ಮೂರು ಕ್ಷೇತ್ರದ ಎಪಿಎಂಸಿ ಚುನಾವಣೆಯಲ್ಲಿ ದೇಸಾಯಿ ಮೇಲುಗೈ ಸಾಧಿಸಿದ್ದಾರೆ.
ಮೂರು ಕ್ಷೇತ್ರದ ಮುಖಂಡರು ಸಾಥ್ ನೀಡಿದ್ದು ಈ ಜಯಕ್ಕೆ ಕಾರಣವಾಗಿದೆ. ಕಳೆದ ಬಾರಿ ನಡೆದ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿತ್ತು. ತದನಂತರ ನಡೆದ ಈ ಚುನಾವಣೆ ಬಹಳಷ್ಟು ಕುತೂಹಲ ಮೂಡಿಸಿತ್ತು. ಅಷ್ಟೇ ಅಲ್ಲ, ಶಾಸಕ ಅಮೃತ ದೇಸಾಯಿ ಅವರಿಗೆ ಫ್ರೀ ಹ್ಯಾಂಡ್ ಕೊಟ್ಟ ಪರಿಣಾಮ ಇವತ್ತಿನ ಫಲಿತಾಂಶ ಬರಲು ಕಾರಣವಾಗಿದೆ.
ಶಾಸಕ ಅಮೃತ ದೇಸಾಯಿ ಕಳೆದ ಒಂದು ವಾರದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಯದ ಹೊಸ್ತಿಲ್ಲನ್ನ ದಾಟಿದ್ದಾರೆ.
ಚುನಾವಣೆಯಲ್ಲಿ ಬಸವರಾಜ ಹೊಸೂರ 9 ಮತಗಳನ್ನ ಪಡೆದು ಅಧ್ಯಕ್ಷರಾಗಿದ್ದು, 10 ಮತಗಳನ್ನು ಪಡೆದು ಕೃಷ್ಣಾ ಕೋಳಾನಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಶಾಸಕ ಅಮೃತ ದೇಸಾಯಿ ಜಯಗಳಿಸಿದಂತಾಗಿದೆ.